ADVERTISEMENT

ಭಗತ್ ಸಿಂಗ್ ಜನ್ಮದಿನ: ನಾಥೂರಾಮ ಗೋಡ್ಸೆ ಭಾವಚಿತ್ರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 23:21 IST
Last Updated 28 ಸೆಪ್ಟೆಂಬರ್ 2023, 23:21 IST
ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಗುರುವಾರ ಭಗತ್ ಸಿಂಗ್‌ ಜನ್ಮದಿನಾಚರಣೆ ಮೆರವಣಿಗೆ ಮುನ್ನ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ನಾಥೂರಾಮ ಗೋಡ್ಸೆ ಭಾವಚಿತ್ರ ಇಡಲಾಗಿತ್ತು
ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಗುರುವಾರ ಭಗತ್ ಸಿಂಗ್‌ ಜನ್ಮದಿನಾಚರಣೆ ಮೆರವಣಿಗೆ ಮುನ್ನ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ನಾಥೂರಾಮ ಗೋಡ್ಸೆ ಭಾವಚಿತ್ರ ಇಡಲಾಗಿತ್ತು   

ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಭಗತ್‌ಸಿಂಗ್ ಜನ್ಮದಿನದ ಅಂಗವಾಗಿ ಗುರುವಾರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಜೊತೆಗೆ ನಾಥೂರಾಮ ಗೋಡ್ಸೆ ಭಾವಚಿತ್ರವನ್ನೂ ಇಟ್ಟು ಮೆರವಣಿಗೆ ಮಾಡಲಾಗಿದೆ.

ಮಂದೇವಾಲ ಗ್ರಾಮದ ಯುವ ಬಳಗದ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಸಂಗೊಳ್ಳಿ ರಾಯಣ್ಣ, ಸಾವರ್ಕರ್, ಸುಖದೇವ, ರಾಜಗುರು, ಚಂದ್ರಶೇಖರ ಆಜಾದ್, ಸುಭಾಷ್‌ಚಂದ್ರ ಬೋಸ್ ಜತೆಗೆ ನಾಥೂರಾಮ ಗೋಡ್ಸೆ ಭಾವಚಿತ್ರವನ್ನೂ ಇಟ್ಟು ಪೂಜೆ ಸಲ್ಲಿಸಲಾಗಿದೆ. ಬಳಿಕ ಎಲ್ಲ ನಾಯಕರ ಭಾವಚಿತ್ರಗಳೊಂದಿಗೆ ಗೋಡ್ಸೆ ಭಾವಚಿತ್ರವನ್ನೂ ಎತ್ತಿನ ಬಂಡಿ ಮೇಲಿಟ್ಟು ಮೆರವಣಿಗೆ ಮಾಡಲಾಯಿತು.

ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಗುರುವಾರ ಭಗತ್ ಸಿಂಗ್‌ ಜನ್ಮದಿನಾಚರಣೆ ಮೆರವಣಿಗೆಯಲ್ಲಿ ನಾಥುರಾಮ್ ಗೋಡ್ಸೆ ಭಾವಚಿತ್ರವನ್ನು ಎತ್ತಿನ ಬಂಡಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT