ADVERTISEMENT

ಬಾರದ ಸಚಿವ ಭಗವಂತ ಖೂಬಾ: ಕಾರ್ಯಕ್ರಮಕ್ಕೆ ಅಡ್ಡಿಯಾದ ಮಳೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 12:09 IST
Last Updated 17 ಆಗಸ್ಟ್ 2021, 12:09 IST
ಕಾದು ನಿಂತ ಬಿಜೆಪಿ ಕಾರ್ಯಕರ್ತರು
ಕಾದು ನಿಂತ ಬಿಜೆಪಿ ಕಾರ್ಯಕರ್ತರು   

ಕಮಲಾಪುರ (ಕಲಬುರ್ಗಿ ಜಿಲ್ಲೆ): ಜನಾಶೀರ್ವಾದ ಯಾತ್ರೆ ನಿಮಿತ್ತ ಬೆಳಿಗ್ಗೆಯೇ ಕಮಲಾಪುರಕ್ಕೆ ಬರಬೇಕಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಸಂಜೆ 5 ಗಂಟೆಯಾದರೂ ಗಂಟೆಯಾದರೂ ಬಾರದಿರುವುದರಿಂದರ ಕಾರ್ಯಕರ್ತರು ಕಾದು ಕಾದು ಸುಸ್ತಾದರು.

ಕಲಬುರ್ಗಿ ಗಡಿ ಗ್ರಾಮ ಕಿಣ್ಣಿ ಸಡಕ್ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದ್ದರು. ಅಲ್ಲಿಂದ ಕಮಲಾಪುರ ಬಿಜೆಪಿ ಕಚೇರಿವರೆಗೆ ಮೆರವಣಿಗೆ ಹಾಗೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ 5ಕ್ಕೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಅಲ್ಲಿಂದ ಹಲವು ಕಾರ್ಯಕರ್ತರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.