ADVERTISEMENT

ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:35 IST
Last Updated 9 ಅಕ್ಟೋಬರ್ 2021, 16:35 IST

ಅಫಜಲಪುರ: ತಾಲ್ಲೂಕಿನ ಅಫಜಲಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಮಾ ಏತ ನೀರಾವರಿ ಕಚೇರಿ ಸಮೀಪ ಶನಿವಾರ ಸಂಜೆ ಟಿಪ್ಪರ್‌–ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಜೇವರ್ಗಿ (ಕೆ) ಗ್ರಾಮದ ಇಸ್ಮಾಯಿಲ್ ಸಾಬ್ ಗುಲಾಬ ಸಾಬ್ ಗೊಳ್ಳೊಳ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಲಬುರಗಿಯಿಂದ ಆಫಜಲಪುರಕ್ಕೆ ವಾಪಸಾಗುತ್ತಿದ್ದ ಇಸ್ಮಾಯಿಲ್‌ಸಾಬ್ ಅವರು ಎದುರಿಗೆ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟರು. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT