ADVERTISEMENT

ಬಣಗಾರ ಸಮಾಜದಿಂದ ಕಾರ್ತಿಕ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:25 IST
Last Updated 20 ನವೆಂಬರ್ 2025, 6:25 IST
ಕಲಬುರಗಿಯ ಬಣಗಾರ ಸಮಾಜದಿಂದ ಮಕ್ತಂಪುರದ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಚಿತ್ರಶೇಖರ ಕಲ್ಯಾಣ ದಂಪತಿ ಹಾಗೂ ರೇವಣಸಿದ್ದಪ್ಪ ಸಿಂಪಿ ಅವರನ್ನು ಸನ್ಮಾನಿಸಲಾಯಿತು
ಕಲಬುರಗಿಯ ಬಣಗಾರ ಸಮಾಜದಿಂದ ಮಕ್ತಂಪುರದ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಚಿತ್ರಶೇಖರ ಕಲ್ಯಾಣ ದಂಪತಿ ಹಾಗೂ ರೇವಣಸಿದ್ದಪ್ಪ ಸಿಂಪಿ ಅವರನ್ನು ಸನ್ಮಾನಿಸಲಾಯಿತು   

ಪ್ರಜಾವಾಣಿ ವಾರ್ತೆ

ಕಲಬುರಗಿ: ಇಲ್ಲಿನ ಬಣಗಾರ ಸಮಾಜದ ವತಿಯಿಂದ ಮಕ್ತಂಪುರದ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಸಮಾಜದ ಹಿರಿಯರಾದ ಚಿತ್ರಶೇಖರ ಕಲ್ಯಾಣ ದಂಪತಿ ಹಾಗೂ ರೇವಣಸಿದ್ದಪ್ಪ ಸಿಂಪಿ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ದೀಪೋತ್ಸವ ಅಂಗವಾಗಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಯಿತು. ಸಮಾಜದ ಹಾಗೂ ಟ್ರಸ್ಟ್‌ನ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಮಾಜದ ಅಧ್ಯಕ್ಷ ರಾಜೇಶ ಬೈರಾಮಡಗಿ, ಪ್ರಧಾನ ಕಾರ್ಯದರ್ಶಿ ಮಹಾರುದ್ರ ಚೌದ್ರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.