ಕಲಬುರ್ಗಿ: ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಾಟೀಲ ಸೇಡಂ ಅವರೊಂದಿಗೆ ಶನಿವಾರ ಗೋಪ್ಯ ಮಾತುಕತೆ ನಡೆಸಿದರು.
ಗುರುಪೌರ್ಣಿಮೆ ಅಂಗವಾಗಿ ಸೇಡಂ ಅವರನ್ನು ಸನ್ಮಾನಿಸಿ ಪಾದಗಳಿಗೆ ನಮಸ್ಕಾರ ಸಲ್ಲಿಸಿದ ನಿರಾಣಿ ಅವರು, ಕೆಲ ಹೊತ್ತು ಎಲ್ಲರಿಂದ ದೂರ ಸರಿದು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
‘ಗುರುಪೌರ್ಣಿಮೆಯ ಕಾರಣ ನನ್ನ ಗುರುಗಳಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದ್ದೇನೆ. ಇದರಲ್ಲಿ ಹೊಸ ವಿಚಾರ ಏನೂ ಇಲ್ಲ’ ಎಂದು ಸಚಿವ ಹೇಳಿದರು.ಈ ಸಂದರ್ಭದಲ್ಲಿ ಸೇಡಂ ಅವರ ಹತ್ತಿರ ಬಂದ ಪಕ್ಷದ ಕೆಲವು ಮುಖಂಡರು ‘ಸಾಹೇಬರಿಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಕೋರಿದರು.
ಶಾಸಕರಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಕೂಡ ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.