ADVERTISEMENT

ಚಿಂಚೋಳಿ | ಚನ್ನೂರು ಸೇತುವೆಯಿಂದ ಬಿದ್ದು ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:55 IST
Last Updated 13 ಆಗಸ್ಟ್ 2025, 5:55 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದ ಹಿನ್ನೀರಿನಲ್ಲಿ ಬರುವ ಚನ್ನೂರು ಸೇತುವೆಯಿಂದ ಬಿದ್ದು ಬೀದರ್ ಜಿಲ್ಲೆಯ ಕೂಡಾಂಬಲ ಗ್ರಾಮದ ಶಂಕರ ಚಿಮ್ಮನಚೋಡ (63) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಮಂಗಳವಾರ ಗೊತ್ತಾಗಿದೆ.

ADVERTISEMENT

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮನೆಯವರು ನೀಡಿದ ದೂರಿನ ಮೇರೆಗೆ ಜಲಾಶಯಕ್ಕೆ ತೆರಳಿದ ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ್ ನಿಂಗಮ್ಮ ಜಿನಿಕೇರಿ ಅವರು ಶವ ಪರಿಶೀಲಿಸಿದರು.

ಶಂಕರ ಚಿಮ್ಮನಚೋಡ ಅವರಿಗೆ ಸ್ವಗ್ರಾಮದ ಪಂಜಾಬ್ ನ್ಯಾಷನಲ್ ಬ್ಯಾಂಖ್ ಶಾಖೆಯಲ್ಲಿ ಕೃಷಿ ಸಾಲದ ಜತೆಗೆ ಖಾಸಗಿ ವ್ಯಕ್ತಿಗಳ ಬಳಿಯೂ ಸೇರಿ ಅಂದಾಜು ₹4 ಲಕ್ಷ ಸಾಲವಿತ್ತು. ಇದರಿಂದ ಜಿಗುಪ್ಸೆಗೊಂಡು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.