ಕಲಬುರ್ಗಿ: ಕೋವಿಡ್ ಲಸಿಕೆ ಪಡೆಯದೇ ಕರ್ತವ್ಯಕ್ಕೆ ಹಾಜರಾಗಲು ಬಂದ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುಭಾಶ್ಚಂದ್ರ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಕಡ್ಡಾಯ ರಜೆ ಶಿಕ್ಷೆ ನೀಡಿದ್ದಾರೆ.
‘ಸುಭಾಶ್ಚಂದ್ರ ಅವರು ಆಗಸ್ಟ್ 24ರಂದು ಶಾಲೆಗೆ ಗೈರು ಆಗಿದ್ದರು. ಅದೇ ದಿನ ಶಾಲೆಗೆ ಹಾಜರಾಗಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲನೆ ಸಂದರ್ಭದಲ್ಲಿ ಶಿಕ್ಷಕ ಕೋವಿಡ್ ಲಸಿಕೆ ಪಡೆಯದಿರುವುದು ಗಮನಕ್ಕೆ ಬಂತು. ಹೀಗಾಗಿ, ಎರಡು ಡೋಸ್ ಲಸಿಕೆ ಪಡೆಯುವವರೆಗೂ ಶಾಲೆಗೆ ಬಾರದಂತೆ ಕಡ್ಡಾಯ ರಜೆ ನೀಡಲಾಗಿದೆ’ ಎಂದು ವೆಂಕಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.