ADVERTISEMENT

ಕಲಬುರ್ಗಿ: ಪತ್ನಿ ಸಾವು, ಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 3:11 IST
Last Updated 13 ಫೆಬ್ರುವರಿ 2021, 3:11 IST
   

ಮಹಾಗಾಂವ್‌ ಕ್ರಾಸ್‌ (ಕಮಲಾಪುರ): ಪತ್ನಿ ಹೃದಯಾಘಾತದಿಂದ ಮೃತಪಟ್ಟ ಮಾರನೇ ದಿನವೇ ರಾತ್ರಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಮಹಾಗಾಂವ ಕ್ರಾಸ್ ಬಳಿ ಶುಕ್ರವಾರ ಬೆಳಕಿಗೆ ಬಂದಿದೆ.

ದೇವೇಂದ್ರ ರವೀಂದ್ರ ಗುತ್ತೇದಾರ (28) ಮತ್ತು ಜ್ಯೋತಿ (23) ಮೃತರು. ತಾಲ್ಲೂಕಿನ ಲಾಡ್‌ಮುಗಳಿ ಗ್ರಾಮಸ್ಥರಾದ ಅವರು ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದರು.

‘ಮನೆ ಬಾಡಿಗೆ ವಸೂಲಿ ಮತ್ತು ಇತರ ಕಾರ್ಯಕ್ಕೆಂದು ಕಲಬುರ್ಗಿಗೆ ಬಂದಿದ್ದ ವೇಳೆ ಪತ್ನಿ ಜ್ಯೋತಿ ಹೃದಯಾಘಾತದಿಂದ ಮೃತಪಟ್ಟಿದ್ದು ದೇವೇಂದ್ರಗೆ ಗೊತ್ತಾಗಿದೆ. ಶುಕ್ರವಾರ ಬೆಳಿಗ್ಗೆ ಅವರ ಶವ ಮಹಾಗಾಂವ ಕ್ರಾಸ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಮಹಾಗಾಂವ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.