ಕಲಬುರಗಿ:ನಗರದ ರಾಘವೇಂದ್ರ ಕಾಲೊನಿಯಲ್ಲಿ ಶನಿವಾರ ಇಬ್ರಾಹಿಂ ಎಂಬಾತ ಆತನ ಪತ್ನಿ ನಸೀಮಾ ಬೇಗಂ (35) ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಮದ್ಯವ್ಯಸನಿಯಾಗಿದ್ದ ಇಬ್ರಾಹಿಂ ನಸೀಮಾಗೆ ಕಿರುಕುಳ ನೀಡುತ್ತಿದ್ದನು. ತವರು ಮನೆಯಿಂದ ಮದ್ಯ ಕುಡಿಯಲು ಹಣ ತರುವಂತೆ ಪೀಡಿಸುತ್ತಿದ್ದ. ನಸೀಮಾ ತವರು ಮನೆಯಿಂದ ಹಣ ತರದೇ ಇದ್ದುದರಿಂದ ಆಕೆ ಮೇಲೆ ಕೋಪಗೊಂಡಿದ್. ಮಗುವಿಗೆ ಹಾಲುಣಿಸುತ್ತಿರುವಾಗಲೇ ಇಬ್ರಾಹಿಂ ಮಾರಕಾಸ್ತ್ರದಿಂದ ನಸೀಮಾ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಆರೋಪಿ ಇಬ್ರಾಹಿಂನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.