ಕಲಬುರ್ಗಿ: ನಗರದ ಹುಮನಾಬಾದ್ ರಸ್ತೆ, ಸ್ಟೇಷನ್ ಏರಿಯಾ, ನೆಹರೂ ಗಂಜ್ ಹಾಗೂ ತಾಲ್ಲೂಕಿನ ನಂದಿಕೂರ ಗ್ರಾಮದಲ್ಲಿ ಈಚೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ₹ 1.5 ಲಕ್ಷ ಮೌಲ್ಯದ ಅಕ್ರಮ ಮದ್ಯ ಹಾಗೂ ನಾಲ್ಕು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಲಬುರ್ಗಿ– ಹುಮನಾಬಾದ್ ರಸ್ತೆಯ ಉಪಳಾಂವ ಕ್ರಾಸ್ ಹತ್ತಿರ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ, ಸ್ಟೇಷನ್ ಏರಿಯಾದಲ್ಲಿ ಅಬಕಾರಿ ನಿರೀಕ್ಷಕರಾದ ಸಂತೋಷಕುಮಾರ, ನೆಹರೂ ಗಂಜ್ ಏರಿಯಾದಲ್ಲಿ ಪ್ರವೀಣಕುಮಾರ ಹಾಗೂ ಬಸವರಾಜ ಉಳ್ಳೆಸೂಗೂರು, ನಂದಿಕೂರ ಗ್ರಾಮದಲ್ಲಿ ಮಲ್ಲಿಕಾರ್ಜುನ ಡಿ.ಹಾಗೂ ನರೆಂದ್ರಕುಮಾರ ದಾಳಿ ನಡೆಸಿದ್ದಾರೆ.
ಅಬಕಾರಿ ಅಧಿಕಾರಿಗಳಾದ ಪ್ರವೀಣಕುಮಾರ, ಬಸವರಾಜ ಉಳ್ಳೆಸೂಗೂರು, ಕಾನ್ಸ್ಟೆಬಲ್ಗಳಾದ ಬಸವರಾಜ ಎಂ., ಸಿದ್ದಮಲ್ಲಪ್ಪ , ರವಿಕುಮಾರ, ಭೀಮಶೇನರಾವ್, ರಾಜೇಂದ್ರನಾಥ, ವಸಂತಕುಮಾರ, ಶಿವಪ್ಪಗೌಡ , ವಾಹನ ಚಾಲಕರಾದ ಸುನೀಲಕುಮಾರ, ವೆಂಕಟೇಶ ಹಾಗೂ ಸಂತೋಷ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.