ಕಮಲಾಪುರ: ತಾಲ್ಲೂಕಿನ ಕುರಿಕೋಟಾ ಸೇತುವೆ ಬಳಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಶವ ಬುಧವಾರ ಪತ್ತೆಯಾಗಿದೆ.
ಕಲಬುರ್ಗಿ ನಗರದ ಕುವೆಂಪುನಗರದ ಮಂಜುನಾಥ ರಂಗರಾಜ ಕಾಂಬ್ಳೆ (24) ಮೃತ ಯುವಕ.
ಕಳೆದ ಡಿ.6ರಂದು ಕುರಿಕೋಟಾ ಸೇತುವೆ ಬಳಿ ತೆರಳಿ ತನ್ನ ಸಹೋದರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ನದಿಗೆ ಹಾರಿದ್ದಾನೆ. ಸಂಬಂಧಿಕರು ಈ ಬಗ್ಗೆ ಮಹಾಗಾಂವ್ ಪೊಲೀಸರಿಗೆ ತಿಳಿಸಿದ್ದಾರೆ. ಅಂದಿನಿಂದ 3 ದಿನಗಳ ಕಾಲ ಅಗ್ನಿಶಾಮಕ ದಳದೊಂದಿಗೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದು, ಬುಧವಾರ ಶವ ಪತ್ತೆಯಾಗಿದೆ ಎಂದು ಪಿಎಸ್ಐ ಹಸೇನ್ ಬಾಷಾ ತಿಳಿಸಿದ್ದಾರೆ. ಮಹಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.