ADVERTISEMENT

ರಾಮಮಂದಿರದ ಬಳಿ ವಾಲ್ಮೀಕಿ ಮಂದಿರ ಸ್ಥಾಪಿಸಿ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸಾನಂದಪುರಿ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 5:33 IST
Last Updated 28 ನವೆಂಬರ್ 2020, 5:33 IST
27ಎಸ್ಎಚ್ಪಿ 1: ಶಹಾಪುರ ನಗರದ ಅತಿಥಿ ಗೃಹದಲ್ಲಿ ಶುಕ್ರವಾರ ವಾಲ್ಮೀಕಿ ಆಶ್ರಯದ ಪ್ರಸಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಿತು
27ಎಸ್ಎಚ್ಪಿ 1: ಶಹಾಪುರ ನಗರದ ಅತಿಥಿ ಗೃಹದಲ್ಲಿ ಶುಕ್ರವಾರ ವಾಲ್ಮೀಕಿ ಆಶ್ರಯದ ಪ್ರಸಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಿತು   

ಶಹಾಪುರ: ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಎದುರುಗಡೆ ಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಿದರೆ ರಾಮ ಮಂದಿರಕ್ಕೆ ಇನ್ನಷ್ಟು ಮೆರಗು ಬರುತ್ತದೆ. ವಾಲ್ಲೀಕಿ ಇಲ್ಲದೆ ರಾಮಾಯಣವಿಲ್ಲ ಎಂಬುವುದು ಆಳುವ ವರ್ಗ ಅರಿತುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದ ಅತಿಥಿಗೃಹದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ವಾಲ್ಮೀಕಿ ಸಮುದಾಯದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5 ಹೆಚ್ಚಿಸುವ ಬಗ್ಗೆ ಡಿಸೆಂಬರ ಒಳಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ ಹಿನ್ನಲೆಯಲ್ಲಿ ನಾವೆಲ್ಲರೂ ಕಾದು ನೋಡುವಂತೆ ಆಗಿದೆ. ಕೊಟ್ಟ ಮಾತು ಸರ್ಕಾರ ಉಳಿಸಿಕೊಳ್ಳದಿದ್ದರೆ ಮುಂದೆ ಹೋರಾಟ ಹಾದಿ ಕಣ್ಣಮುಂದೆ ಇದೆ. ತಾವೆಲ್ಲರೂ ಪಕ್ಷಾತೀತವಾಗಿ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಎಲ್ಲರು ನನಗೆ ಧ್ವನಿಯಾಗಬೇಕು ಎಂದರು.

ADVERTISEMENT

ರಾಜನಹಳ್ಳಿಲ್ಲಿ ಫೆ.8 ಮತ್ತು9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಸಮುದಾಯದವರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ ಹಾಗೂ ಸಮಾಜದ ಮುಖಂಡರಾದ ರಾಮಚಂದ್ರ ಕಾಶಿರಾಜ, ತಮ್ಮಣ್ಣ ರಾಂಪುರ, ಆರ್.ಚನ್ನಬಸ್ಸು ವನದುರ್ಗ, ಹನುಮೇಗೌಡ ಮರಕಲ್, ಸತ್ಯನಾರಾಯಣ ಅನವಾರ, ಶೇಖರ ದೊರೆ ಕಕ್ಕಸಗೇರಾ, ಶೇಖಪ್ಪ ಯಕ್ಷಿಂತಿ, ಮಾನಪ್ಪ ನಾಗನಟಗಿ, ರಾಘವೇಂದ್ರ ಯಕ್ಷಿಂತಿ, ತಿರುಪತಿ ಯಕ್ಷಿಂತಿ, ಸಂಗಮೇಶ ನುಚ್ಚಿನ, ಈರಣ್ಣ ಮುಡಬೂಳ, ಮಹಾದೇವಪ್ಪ ಶಾರದಹಳ್ಳಿ, ಭೀಮಣ್ಣ ಬೂದನೂರ,ಸುಭಾಸ ರಾಂಪುರ, ನಾಗೇಂದ್ರ ಬಳಬಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.