ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ವೃದ್ಧೆಯೊಬ್ಬರು ನಿದ್ದೆಯ ಮಂಪರಿನಲ್ಲಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕಮಲಾಬಾಯಿ ಗುರುಲಿಂಗಪ್ಪ ಕಲಬುರಗಿ (80) ಮೃತರು. ಕಮಲಾಬಾಯಿ ನಿದ್ದೆಗಣ್ಣಿನಲ್ಲೇ ಹಾಸಿಗೆಯಿಂದ ಎದ್ದು ಮನೆ ಹೊರಗಡೆ ಬಂದಿದ್ದಾರೆ. ಮನೆ ಬಳಿ ಇರುವ ತೆರೆದ ಬಾವಿ ಸುತ್ತಲೂ ರಕ್ಷಣಾ ಗೋಡೆ ಚಿಕ್ಕದಾಗಿದ್ದು ಕಟ್ಟೆ ಎಂದು ಭಾವಿಸಿ ಕೂರಲು ಮುಂದಾದಾಗ, ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಬಾವಿಯಿಂದ ಹೊರ ತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗಾಗಿ, ತಾಲ್ಲೂಕು ಆಸ್ಪತ್ರೆಗೆ ತರಲಾಗಿದೆ. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.