ಕಲಬುರಗಿ: ಜಿಲ್ಲೆಯ ಶಹಾಬಾದ್ ಹಾಗೂ ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ವಿವಿಧ ಮನೆಗಳ ಮೇಲೆ ಸೋಮವಾರ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ, ಬೆಲ್ಲದ ಕೊಳೆ ಹಾಗೂ ಕಲಬೆರಕೆ ಸೇಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಶಹಾಬಾದ್ನ ಮಡ್ಡಿ ನಂ 2 ಏರಿಯಾದ ಸಕ್ಕುಬಾಯಿ ರಮೇಶ ಚವ್ಹಾಣ, ರೇಣುಕಾ ಅರ್ಜುನ ಚವ್ಹಾಣ, ಸುನೀತಾಬಾಯಿ ಚಂದ್ರಕಾಂತ ಚವ್ಹಾಣ ವಾಡಿಯ ನಾಗಮ್ಮಾ ನಂದಕುಮಾರ ಬನಸುಡೆ ಎಂಬುವವರನ್ನು ಬಂಧಿಸಲಾಗಿದೆ.
ಶಹಾಬಾದ್ನ ಮೂರು ಮನೆಗಳಲ್ಲಿ 8 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 40 ಲೀಟರ್ ಬೆಲ್ಲದ ಕೊಳೆ ಹಾಗೂ ವಾಡಿಯ ವಿಜಯ ನಗರ ಏರಿಯಾದಲ್ಲಿ 30 ಲೀಟರ್ ಕಲಬೆರಕೆ ಸೇಂದಿಯನ್ನು ಸಂಗ್ರಹಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
ದಾಳಿಯಲ್ಲಿ ಅಬಕಾರಿ ಕಾನ್ಸ್ಟೆಬಲ್ಗಳಾದ ಶಿವಾನಂದ, ಶರಣಬಸಪ್ಪ, ನಾಗರಾಜ ಹಾಗೂ ವಾಹನ ಚಾಲಕ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.