ಚಿಂಚೋಳಿ: ‘ಸೇವಾಲಾಲ ಮಹಾರಾಜರು ಬಂಜಾರಾ ಸಮುದಾಯಕ್ಕೆ ಸನ್ಮಾರ್ಗ ತೋರಿದ ಮಹಾನ ದಾರ್ಶನಿಕ’ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.
ತಾಲ್ಲೂಕಿನ ಬಾವಿತಾಂಡಾದಲ್ಲಿ ಸೇವಾಲಾಲ ಮತ್ತು ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲರೂ ಕೆಟ್ಟ ಚಟಗಳನ್ನು ತೊರೆದ ಸೇವಾಲಾಲ್ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಲಭಾವಿಯ ಗೋಪಾಲ ಜಾಧವ, ವಿಠಲ ಜಾಧವ ಮತ್ತು ಜೀವಾಸಿಂಗ್ ಜಾಧವ ಮಾತನಾಡಿದರು. ಸ್ಥಳೀಯ ಉಮೇಶ ಮಹಾರಾಜರು ಸಾನಿಧ್ಯವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಅಶೋಕ ಚವ್ಹಾಣ, ಚಂದ್ರಶೆಟ್ಟಿ ಜಾಧವ, ನೀಲಕಂಠ ರಾಠೋಡ್, ಅಲ್ಲಮಪ್ರಭು ಹುಲಿ, ಆರ್ ಗಣಪತರಾವ್, ಗಿರಿರಾಜ ನಾಟಿಕಾರ, ಶ್ರೀಮಂತ ಕಟ್ಟಿಮನಿ, ರಾಜು ಪವಾರ, ಭೀಮರಾವ್ ರಾಠೋಡ್, ಉಲ್ಲಾಸ ಕೆರಳ್ಳಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸತೀಶರೆಡ್ಡಿ ತಾಜಲಾಪುರ, ಕಿಷ್ಟಪ್ಪ ಮಿರಿಯಾಣ, ವಿಜಯಕುಮಾರ ರಾಠೋಡ್, ಗೋವಿಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.