ADVERTISEMENT

ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 11:13 IST
Last Updated 30 ಅಕ್ಟೋಬರ್ 2018, 11:13 IST
ವಿಶ್ವನಾಥರೆಡ್ಡಿ
ವಿಶ್ವನಾಥರೆಡ್ಡಿ   

ಕಲಬುರ್ಗಿ: ಸಾಲಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೈತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.

ಸೇಡಂ ತಾಲ್ಲೂಕು ನಾಚವಾರದ ವಿಶ್ವನಾಥರೆಡ್ಡಿ ಸಿದ್ದರಾಮರೆಡ್ಡಿ ನಾಚವಾರ (35) ಮೃತಪಟ್ಟವರು. ಇವರು ಅ.28ರಂದು ಕ್ರಿಮಿನಾಶಕ ಸೇವಿಸಿದ್ದರು.

‘ವಿಶ್ವನಾಥರೆಡ್ಡಿ ಅವರಿಗೆ 1 ಎಕರೆ 5 ಗುಂಟೆ ಜಮೀನಿದ್ದು, ಬ್ಯಾಂಕ್ ಹಾಗೂ ಖಾಸಗಿಯಾಗಿ ಸಾಲ ಮಾಡಿದ್ದರು. ಸಾಲ ಪಾವತಿಸುವ ದಾರಿ ಕಾಣದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಮೃತರಿಗೆ ಪತ್ನಿ, ನಾಲ್ಕು ಜನ ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.