ಕಲಬುರ್ಗಿ: ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿವಾನಂದ ಕೊಪ್ಪದ ಎರಡನೇ ಬಾರಿಗೆ ಪುನರಾಯ್ಕೆಯಾದರು.
ನಗರದ ಗಿರಿಜಾ ನಾಟ್ಯಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಲ್ಯಾಣಪ್ಪ ಹಂಗರಗಿ (ಗೌರವ ಅಧ್ಯಕ್ಷ), ದೌಲತರಾಯ ದೇಸಾಯಿ ಹಾಗೂ ಸುನಂದಾ ಪವಾರ (ಉಪಾಧ್ಯಕ್ಷರು), ರಾಜೇಶ ನೀಲಹಳ್ಳಿ (ಪ್ರಧಾನ ಕಾರ್ಯದರ್ಶಿ), ಶ್ರೀಪಾದ ದೇಶಪಾಂಡೆ (ಸಹ ಕಾರ್ಯದರ್ಶಿ), ವಿದ್ಯಾ ಕುಲಕರ್ಣಿ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾದರು.
ತಾಲ್ಲೂಕು ಪ್ರತಿನಿಧಿಗಳು: ರಮೇಶ ಪತ್ತಾರ (ಕಲಬುರ್ಗಿ ದಕ್ಷಿಣ ವಲಯ), ಸೋಮನಾಥ ಮಹೇಂದ್ರಕರ (ಕಲಬುರ್ಗಿ ಉತ್ತರ ವಲಯ), ನಾಗಣ್ಣಗೌಡ ಪಾಟೀಲ (ಜೇವರ್ಗಿ), ಸೂರ್ಯಕಾಂತ ನಂದೂರ (ಚಿತ್ತಾಪೂರ), ಪ್ರಭು ಜಾಣ (ಚಿಂಚೋಳಿ), ಸವಿತಾ ಕುಂಬಾರ (ಸೇಡಂ) ಹಾಗೂ ಸಂಜೀವ ಕಟಗೆ ಅಫಜಲಪುರದ ಪ್ರತಿನಿಧಿಯಾಗಿ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.