ADVERTISEMENT

ಸಿಲಿಂಡರ್ ಸ್ಫೋಟ; ಮನೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 15:32 IST
Last Updated 17 ಮಾರ್ಚ್ 2021, 15:32 IST
ಚಿತ್ತಾಪುರದ ಬಹಾರ್ ಪೇಠದಲ್ಲಿ ಸಿಲಿಂಡರ್ ಸ್ಫೋಟಗೊಂಡ ಮನೆಯ ಬೆಂಕಿ ನಂದಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ
ಚಿತ್ತಾಪುರದ ಬಹಾರ್ ಪೇಠದಲ್ಲಿ ಸಿಲಿಂಡರ್ ಸ್ಫೋಟಗೊಂಡ ಮನೆಯ ಬೆಂಕಿ ನಂದಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ   

ಚಿತ್ತಾಪುರ: ಪಟ್ಟಣದ ಬಹಾರ್ ಪೇಠದಲ್ಲಿ ಬುಧವಾರ ಮಧ್ಯಾಹ್ನ ಪತ್ರಾಸ್ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಿಸಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯ, ಸಾಮಗ್ರಿಗಳು ಸುಟ್ಟು ಹೋಗಿವೆ.

ಜಗಮ್ಮ ಮೋನಪ್ಪ ಸಿಂದಗಿ ಎಂಬುವವರ ಮನೆಯಲ್ಲಿ ಈ ಅಗ್ನಿ ದುರಂತ ಜರುಗಿದೆ.

ಮನೆಯಲ್ಲಿ ಅವರೊಬ್ಬರೇ ವಾಸವಾಗಿದ್ದರು. ಬುಧವಾರ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುವ ಮುಂಚೆ ಜಗಮ್ಮ ದೇವರ ಜಗುಲಿ ಮುಂದೆ ದೀಪ ಹಚ್ಚಿಟ್ಟು ಹೋಗಿದ್ದರು. ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ದುರಂತ ನಡೆದಿದೆ ಎನ್ನಲಾಗಿದೆ.

ADVERTISEMENT

ಮನೆಗೆ ಬೆಂಕಿ ತಗುಲಿದಾಗ ಆರಿಸಲು ಓಡಿ ಬಂದ ಬಡಾವಣೆಯ ವ್ಯಕ್ತಿಗೆ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ.

₹ 50 ಸಾವಿರನಗದು ಸೇರಿದಂತೆ ದವಸ ಧಾನ್ಯ, ಬಟ್ಟೆ ಒಟ್ಟು ₹ 1.50 ಲಕ್ಷದ ಮೌಲ್ಯದ ಸಾಮಗ್ರಿಗಳು ಸುಟ್ಟುಹೋಗಿವೆ ಎಂದು ಜಗಮ್ಮ ತಿಳಿಸಿದ್ದಾರೆ. ಪಿಎಸ್ಐ ಮಂಜುನಾಥರೆಡ್ಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.