ADVERTISEMENT

ಕಲಬುರ್ಗಿ: ಬಾಲಕನ ರಕ್ಷಿಸಿ ನೀರು ಪಾಲಾದ ಸರ್ಕಾರಿ ನೌಕರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 6:51 IST
Last Updated 31 ಅಕ್ಟೋಬರ್ 2019, 6:51 IST
ನವೀನ್‌ ಕುಮಾರ್‌
ನವೀನ್‌ ಕುಮಾರ್‌   

ಕಲಬುರ್ಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಬಳಿ ಕಾಗಿಣಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಬೆಳಿಗ್ಗೆ ಈಜಲು ತೆರಳಿದ್ದ ಯಡಗಾ ಸರ್ಕಾರಿ ಪ್ರೌಢ ಶಾಲೆ ದ್ವಿತೀಯ ದರ್ಜೆ ಸಹಾಯಕ ನವೀನ್‌ ಕುಮಾರ್‌ (32) ನದಿ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಳಿಗ್ಗೆ ಈಜಲು ಐದಾರು ಜನ ತೆರಳಿದ್ದರು‌. ಅದರಲ್ಲಿ ಬಾಲಕನೋರ್ವನನ್ನು ರಕ್ಷಿಸಲು ತೆರಳಿದಾಗ ನವೀನಕುಮಾರ್ ಸುಳಿಗೆ ಸಿಲುಕಿ ಮುಳುಗಿದರು‌.

ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ‌ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT