ADVERTISEMENT

ಕಲಬುರ್ಗಿ: ಮನೆ ಕಟ್ಟಿಸಿಕೊಡಲು ಆಗ್ರಹಿಸಿ ಚಾವಣಿ ಮೇಲೆ ಕುಳಿತು ಅಜ್ಜಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 10:20 IST
Last Updated 16 ಅಕ್ಟೋಬರ್ 2020, 10:20 IST
ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಶುಕ್ರವಾರ ಮನೆ ಚಾವಣಿ ಏರಿ ಪ್ರತಿಭಟನೆ ಮಾಡಿದ ಕಮಲಮ್ಮ
ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಶುಕ್ರವಾರ ಮನೆ ಚಾವಣಿ ಏರಿ ಪ್ರತಿಭಟನೆ ಮಾಡಿದ ಕಮಲಮ್ಮ   

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಕಮಲಮ್ಮ ಎಂಬ ಅಜ್ಜಿಯೊಬ್ಬರು ಹೊಸ ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ತಮ್ಮ ಹಳೆ ಮನೆಯ ಚಾವಣಿ ಮೇಲೆ ಕುಳಿತು ಪ್ರತಿಭಟನೆ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ ಅವರು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಗ್ರಾಮಕ್ಕೆ ಬಂದ ಸಂದರ್ಭದಲ್ಲೂ ಅಜ್ಜಿ ಮನೆ ಏರಿ ಕುಳಿತಿದ್ದರು. ಆದರೆ ಇದನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.

ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ನನ್ನ ಮನೆ ಹಾಳಾಗಿದೆ. ವಾಸಕ್ಕೆ ಸುರಕ್ಷಿತ ಮನೆ ಇಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

ADVERTISEMENT

ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದ ಸಚಿವರ ನಡೆ ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.