ADVERTISEMENT

ಕಲಬುರ್ಗಿ: ಗಂಡೋರಿ ನಾಲಾದಲ್ಲಿ ಮುಳುಗಿ ‌ಮೂವರು ವಿದ್ಯಾರ್ಥಿಗಳ ದುರ್ಮರಣ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 13:57 IST
Last Updated 31 ಡಿಸೆಂಬರ್ 2019, 13:57 IST

ಕಲಬುರ್ಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನಲ್ಲಿರುವ ಗಂಡೋರಿ ನಾಲಾ ಜಲಾಶಯದಲ್ಲಿ ಈಜಲು ತೆರಳಿದ್ದ ವಿಜಯಪುರ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಮಂಗಳವಾರ ನೀರಿನಲ್ಲಿ ‌ಮುಳುಗಿ ಮೃತಪಟ್ಟಿದ್ದಾರೆ.

ಮೃತರು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದ ಸತ್ಯಸಾಯಿ ಪ್ರೇಮನಿಕೇತನ ವಸತಿ ಶಾಲೆಯ ವಿದ್ಯಾರ್ಥಿಗಳು.

ಇಂಡಿಯ ಮಂಜುನಾಥ ಚನ್ನು ಯಾದವಾಡ (15), ದೇವರಹಿಪ್ಪರಗಿಯ ಲಕ್ಷ್ಮಣ ಭೀಮರಾಯ ಡೋಣೂರ (14), ವಿಜಯಪುರದ ಶುಭಂ ಹೊಸೂರ (15) ಮೃತಪಟ್ಟವರು.

ADVERTISEMENT

ಕಮಲಾಪುರದಲ್ಲಿ ಈಚೆಗೆ ಆರಂಭವಾದ ಸತ್ಯಸಾಯಿ ಸಂಸ್ಥೆಯ ವಿಶ್ವವಿದ್ಯಾಲಯ ವೀಕ್ಷಿಸಲು ನಾಲ್ವರು ಶಿಕ್ಷಕರೊಂದಿಗೆ 96 ವಿದ್ಯಾರ್ಥಿಗಳು ಬಂದಿದ್ದರು. ನಂತರ ಗಂಡೋರಿ ನಾಲಾ ಜಲಾಶಯಕ್ಕೆ ಈಜಲು ತೆರಳಿದ ಸಂದರ್ಭದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ‌ಮಾರ್ಬನ್ಯಾಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.