ADVERTISEMENT

ಹಲಕರ್ಟಿ: ಕಾಶಿ ಜಗದ್ಗುರುಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 7:01 IST
Last Updated 21 ಜನವರಿ 2022, 7:01 IST
ವಾಡಿ ಸಮೀಪದ ಹಲಕರ್ಟಿ ಕಟ್ಟಿಮನಿ ಹಿರೇಮಠಕ್ಕೆ ಭೇಟಿ ನೀಡಿದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಗೆ ಮುನೀಂದ್ರ ಶಿವಾಚಾರ್ಯ ಹಾಗೂ ದಂಡಗುಂಡ ಸಂಗನಬಸವ ಸ್ವಾಮಿಗಳು ಸತ್ಕರಿಸಿದರು
ವಾಡಿ ಸಮೀಪದ ಹಲಕರ್ಟಿ ಕಟ್ಟಿಮನಿ ಹಿರೇಮಠಕ್ಕೆ ಭೇಟಿ ನೀಡಿದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಗೆ ಮುನೀಂದ್ರ ಶಿವಾಚಾರ್ಯ ಹಾಗೂ ದಂಡಗುಂಡ ಸಂಗನಬಸವ ಸ್ವಾಮಿಗಳು ಸತ್ಕರಿಸಿದರು   

ವಾಡಿ: ‘ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಹಿರಿಯರ ಗದ್ದುಗೆಗೆ ಶಿಲಾಮಂಟಪದ ರೂಪು ಕೊಟ್ಟಿದ್ದು ಅತ್ಯಂತ ಆದರ್ಶನೀಯ ಕೆಲಸವಾಗಿದೆ. ಹಿರಿಯರ ಬಗೆಗಿನ ಗೌರವ ಭಕ್ತಿಯ ರೂಪ ತಾಳಿದೆ ಎನ್ನುವುದಕ್ಕೆ ಶಿಲಾಮಂಟಪವೇ ಸಾಕ್ಷಿ’ ಎಂದು ಕಾಶಿ ಜ್ಞಾನಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಸಮೀಪದ ಹಲಕರ್ಟಿ ಗ್ರಾಮದ ಶ್ರೀಮುನಿಂದ್ರ ಶ್ರೀಗಳ ಗದ್ದುಗೆ ಮತ್ತು ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ನಂತರ ಧರ್ಮ ಸಭೆ ಉದ್ದೇಶಿಸಿ ಮಾತನಾಡಿದರು.

ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯ, ದಂಡಗುಂಡ ಸಂಗನಬಸವ ಶಿವಾಚಾರ್ಯ, ಶಾಖಾಪುರ ತಪೋವನ ಮಠದ ಸಿದ್ದರಾಮ ಶಿವಾಚಾರ್ಯ, ಗ್ರಾಮಸ್ಥರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.