ADVERTISEMENT

ಸಿಲಿಂಡರ್ ಅಕ್ರಮ ಸಾಗಾಟ: ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಮೇ 2021, 4:59 IST
Last Updated 5 ಮೇ 2021, 4:59 IST
ಅಕ್ರಮವಾಗಿ ಕಲಬುರ್ಗಿಯಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಹೈದರಾಬಾದ್‌ಗೆ ಕೊಂಡೊಯ್ಯುತ್ತಿದ್ದ ವಾಹನದ ಚಾಲಕರ ಹಾಗೂ ಹೆಲ್ಪರ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು
ಅಕ್ರಮವಾಗಿ ಕಲಬುರ್ಗಿಯಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಹೈದರಾಬಾದ್‌ಗೆ ಕೊಂಡೊಯ್ಯುತ್ತಿದ್ದ ವಾಹನದ ಚಾಲಕರ ಹಾಗೂ ಹೆಲ್ಪರ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು   

ಕಲಬುರ್ಗಿ: ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇದ್ದರೂ ಅಕ್ರಮವಾಗಿ ಹೈದರಾಬಾದ್‌ಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಆಮ್ಲಜನಕ ಉತ್ಪಾದನಾ ಸಂಸ್ಥೆಯ ಮಾಲೀಕ, ವಾಹನದ ಚಾಲಕ, ಹೆಲ್ಪರ್ ಹಾಗೂ ವೈದ್ಯರ ವಿರುದ್ಧ ಕಲಬುರ್ಗಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ, ಹೆಲ್ಪರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಗೋಪಾಲರಾವ್ ಭಂಡಾರೆ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ವಿಜಯ ಆಕ್ಸಿ ಅಂಡ್ ಇಂಡಸ್ಟ್ರಿಯಲ್ ಗ್ಯಾಸಸ್‌ನ ಮಾಲೀಕ ವಿಜಯ ಮೆಹ್ತಾ, ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಹೈದರಾಬಾದ್‌ನ ಮೊಹಮ್ಮದ್ ಇರ್ಫಾನ್, ಕೊಟ್ಟಾಪೇಟ ಸರೂರ ನಗರದ ಶೇಖ್ ಹಮೀದ್ ಹಾಗೂ ಸಿಲಿಂಡರ್‌ಗಳನ್ನು ತರುವಂತೆ ಹೇಳಿದ ಹೈದರಾಬಾದ್‌ನ ರೇಟಿ ಬೌಲಿಯ ಇಂಟೆಗ್ರೊ ಆಸ್ಪತ್ರೆಯ ಡಾ. ಫೈಜುಲ್ಲಾ ಖಾನ್ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT