ADVERTISEMENT

ಜಂಗಮಶೆಟ್ಟಿ ಪ್ರಶಸ್ತಿಗೆ ದೀಪಕ್, ಶಿವಯ್ಯಸ್ವಾಮಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 12:22 IST
Last Updated 11 ಜುಲೈ 2021, 12:22 IST
ದೀಪಕ್
ದೀಪಕ್   

ಕಲಬುರ್ಗಿ: ಇಲ್ಲಿನ ರಂಗಸಂಗಮ ಕಲಾ ವೇದಿಕೆ ವತಿಯಿಂದ ಪ್ರತಿವರ್ಷ ಕೊಡಮಾಡುವ ರಾಜ್ಯಮಟ್ಟದ 2020ನೇ ಸಾಲಿನ ಎಸ್.ಬಿ. ಜಂಗಮಶೆಟ್ಟಿ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ದೀಪಕ್ ಮೈಸೂರು ಮತ್ತು ಹಿರಿಯ ನಟ ಶಿವಯ್ಯಸ್ವಾಮಿ ಬಿಬ್ಬಳ್ಳಿ ಆಯ್ಕೆಯಾಗಿದ್ದಾರೆ.

ನಟ, ನಿರ್ದೇಶಕ, ಸಂಘಟಕ ದೀಪಕ್ ಮೈಸೂರು ಸಂಚಲನ ಮೈಸೂರು ಸಂಸ್ಥೆಯ ಸ್ಥಾಪಕರಾಗಿದ್ದು ನೀನಾಸಂ ರಂಗಶಿಕ್ಷಣದ ಪದವೀಧರರಾಗಿದ್ದಾರೆ.ಸಾವಿರಕ್ಕೂ ಹೆಚ್ಚುನಾಟಕಗಳ ನಿರ್ದೇಶನ ಮಾಡಿದ್ದಾರೆ. ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕರ್ನಾಟಕದಲ್ಲಿ ವಿಶೇಷವಾಗಿ ಆಯೋಜಿಸುವ ಸಂಚಲನ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ರಂಗ ಹಬ್ಬದ ರೂವಾರಿಯಾರಿದ್ದಾರೆ.

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಶಿವಯ್ಯ ಸ್ವಾಮಿಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದವರು. ಗ್ರಾಮೀಣ ಭಾಗದ ನೂರಾರು ನಾಟಕಗಳಲ್ಲಿ ನಟರಾಗಿ,ನಿರ್ಮಾಪಕರಾಗಿ, ರಂಗ ಕಲೆಯಪೋಷಣೆಗೆ ಹಾಗೂ ರಂಗ ತಂಡಗಳ ಬೆಳವಣಿಗೆಗೆಶ್ರಮಿಸುತ್ತಿದ್ದಾರೆ.

ADVERTISEMENT

ಜಂಗಮಶೆಟ್ಟಿ ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಜುಲೈ 18ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗ ಸಂಗಮ ಕಲಾವೇದಿಕೆಯ ಸಂಚಾಲಕಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.