ADVERTISEMENT

ಕಲಬುರಗಿ | ಹೆಚ್ಚಿನ ಪುಸ್ತಕಗಳು ಬಿಡುಗಡೆ ಅಭಿಮಾನದ ಸಂಗತಿ: ನೀಲಾಂಬಿಕಾ ಪಾಟೀಲ

ಬಸವಗೀತೆ ಸತ್ಯ ಸಂವಾದ 9 ಸಂಪುಟಗಳ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:28 IST
Last Updated 9 ಫೆಬ್ರುವರಿ 2026, 7:28 IST
ಕಲಬುರಗಿಯ ಕನ್ನಡ ಭವನದಲ್ಲಿ ಭಾನುವಾರ ಪತ್ರಕರ್ತ ಬಸವರಾಜ ಸ್ವಾಮಿ ವಿರಚಿತ ‘ಬಸವಗೀತೆ’ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಿದರು
ಕಲಬುರಗಿಯ ಕನ್ನಡ ಭವನದಲ್ಲಿ ಭಾನುವಾರ ಪತ್ರಕರ್ತ ಬಸವರಾಜ ಸ್ವಾಮಿ ವಿರಚಿತ ‘ಬಸವಗೀತೆ’ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಿದರು   

ಕಲಬುರಗಿ: ‘ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಅಭಿಮಾನದ ಸಂಗತಿ’ ಎಂದು ನಿವೃತ್ತ ಪ್ರಾಧ್ಯಾಪಕಿ ನೀಲಾಂಬಿಕಾ ಪೊಲೀಸ್ ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪತ್ರಕರ್ತ ಬಸವರಾಜ ಸ್ವಾಮಿ ವಿರಚಿತ ‘ಬಸವಗೀತೆ’ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಲಬುರಗಿ ಈಗ ಪುಸ್ತಕ ಹಬ್ ಆಗುತ್ತಿದೆ. ಭವಿಷ್ಯತ್ತಿನಲ್ಲಿ ಪುಸ್ತಕಗಳ ಸ್ಥಾನಮಾನ ಏನು? ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು.

ಪುಸ್ತಕಗಳ ಕುರಿತು ಪ್ರಗತಿಪರ ಚಿಂತಕ ಪ್ರೊ.‌ ಆರ್.ಕೆ. ಹುಡಗಿ, ಶ್ರೀಶೈಲ ನಾಗರಾಳ, ಕೃತಿಕಾರ ಬಸವರಾಜ ಸ್ವಾಮಿ ಮಾತನಾಡಿದರು.

ADVERTISEMENT

ಪತ್ರಕರ್ತರಾದ ಶಿವರಂಜನ್ ಸತ್ಯಂಪೇಟೆ, ಭವಾನಿಸಿಂಗ್ ಠಾಕೂರ ವೇದಿಕೆಯಲ್ಲಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು.

ಶಿವರಾಜ ಅಣಜಗಿ ನಿರೂಪಿಸಿದರು. ಸೋಮೇಶಗೌಡ ನಂದಿಕೂರ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಶ್ರೇಯಾ, ಸಹಸ್ರಾ ವಚನ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.