ADVERTISEMENT

ಕಲಬುರಗಿ: ಸಂಗಣ್ಣಗೌಡ ಸಂಕನೂರ ನೆನಹು ಕೃತಿ ಬಿಡುಗಡೆ ನಾಳೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:33 IST
Last Updated 26 ಸೆಪ್ಟೆಂಬರ್ 2025, 6:33 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಸಂಕನೂರು ಗ್ರಾಮದ ಸಂಗಣ್ಣಗೌಡ ಸಂಕನೂರ (ಸಂಗಾರಡ್ಡಿ ಪಾಟೀಲ) ಅವರ ಜೀವನ ಚರಿತ್ರೆ ‘ನೆನಹು’ ಕೃತಿಯ ಬಿಡುಗಡೆ ಇದೇ 27ರಂದು ಬೆಳಿಗ್ಗೆ 11ಕ್ಕೆ ನಗರದ ಖಮಿತಕರ್ ಭವನದಲ್ಲಿ ನಡೆಯಲಿದೆ ಎಂದು ಜೀವನ ಚರಿತ್ರೆಯ ಕರ್ತೃ, ನಿವೃತ್ತ ‍ಪ್ರಾಂಶುಪಾಲ ಪ್ರೊ.ಬಿ.ರಾಮರಡ್ಡಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃತಿಯನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ಬಿ. ದರ್ಶನಾಪುರ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಶಾಸಕ ಅಲ್ಲಮಪ್ರಭು ಪಾಟೀಲ ಭಾಗವಹಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ ವಹಿಸಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಎಂ. ಬಸವರಾಜ, ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ, ವಿಶ್ವನಾಥರಡ್ಡಿ ಮುದ್ನಾಳ ಕಾಲೇಜಿನ ಅಧ್ಯಕ್ಷ ಹಣಮಂತರಡ್ಡಿ ಮುದ್ನಾಳ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ, ಕೃಷಿ ವಿಜ್ಞಾನಿ ಸಿ.ವಿ. ಪಾಟೀಲ ಭಾಗವಹಿಸಲಿದ್ದಾರೆ. ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕ ಕಲ್ಯಾಣರಾವ ಪಾಟೀಲ ಮಾತನಾಡಲಿದ್ದಾರೆ’ ಎಂದರು.

ADVERTISEMENT

ಕೃತಿಯ ಮೊದಲ ಭಾಗ ಸಂಗಣ್ಣಗೌಡ ಸಂಕನೂರ ಅವರ ಆತ್ಮಚರಿತ್ರೆ ಇದ್ದರೆ, ನಂತರದ ಭಾಗ ನನ್ನ ಜೀವನದ ನೆನಪುಗಳನ್ನು ದಾಖಲಿಸಿದ್ದೇನೆ ಎಂದು ಹೇಳಿದರು.

ಬಿ.ಎಸ್.ದೇಸಾಯಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.