ಕಲಬುರ್ಗಿ: ಶಹಾಬಾದ್ ತಾಲೂಕಿನ ಮರತೂರ ಸ್ಟೇಷನ್ ತಾಂಡಾದಿಂದ ಮರತೂರ ಗ್ರಾಮಕ್ಕೆ ಹೋಗುತ್ತಿದ್ದ ಟ್ರ್ಯಾಕ್ಟರ್ ಆಯ ತಪ್ಪಿ ರಸ್ತೆಯ ಬದಿಗೆ ಪಲ್ಟಿಯಾಗಿದ್ದರಿಂದ ಚಾಲಕ ಸೇರಿದಂತೆ ಇಬ್ಬರು ಟ್ರ್ಯಾಕ್ಟರ್ ಅಡಿಗೆ ಸಿಕ್ಕು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಭು ರಾಠೋಡ (26), ದೇವರಾಜ ಚವ್ಹಾಣ (30) ಮೃತಪಟ್ಟವರು. ಇಬ್ಬರೂ ಮರತೂರ ಸ್ಟೇಷನ್ ತಾಂಡಾ ನಿವಾಸಿಗಳಾಗಿದ್ದಾರೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.