ADVERTISEMENT

ಯುವಕರಿಬ್ಬರು ನೀರು ಪಾಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 10:29 IST
Last Updated 9 ಅಕ್ಟೋಬರ್ 2019, 10:29 IST

ಕಲಬುರ್ಗಿ: ತಾಲೂಕಿನ ಕೊಳ್ಳೂರ ಗ್ರಾಮದ ಕೆರೆಯಲ್ಲಿ ಸಸಿ ಬಿಡಲು ಹೋಗಿ ಯುವಕರಿಬ್ಬರು ಬುಧವಾರ ನೀರು ಪಾಲಾಗಿದ್ದಾರೆ.

ಗಣೇಶ ಗುತ್ತೇದಾರ (19) ಮತ್ತು ಗೋಪಾಲ ಪಾಟೀಲ (19) ನೀರು ಪಾಲಾದವರು.

ನವರಾತ್ರಿ ನಿಮಿತ್ತ ಮನೆಯಲ್ಲಿ ಹಾಕಿದ ಸಸಿಗಳನ್ನು ಕೆರೆಯಲ್ಲಿ ಬಿಡಲು ಹೋಗಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ.

ADVERTISEMENT

ಇಬ್ಬರಿಗಾಗಿ ಪೊಲೀಸರು ಹಾಗೂ ಈಜುಗಾರರು ಶೋಧ ನಡೆಸಿದ್ದಾರೆ. ಫರಹತಾಬಾದ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.