ADVERTISEMENT

ಚಿಂಚೋಳಿ: ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:53 IST
Last Updated 16 ಆಗಸ್ಟ್ 2024, 15:53 IST

ಚಿಂಚೋಳಿ: ಡೀಸೆಲ್ ಮೈಮೇಲೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಫತೆಪುರ ಕ್ರಾಸ್‌ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವಕನ್ನು ಮಹೇಶ ಮಾರುತಿ ರೇಖುಳಗಿ (27) ಎಂದು ಗುರುತಿಸಲಾಗಿದೆ. ಮೂಲತಃ ಬೀದರ್ ಜಿಲ್ಲೆಯ ರೇಕುಳಗಿ ಗ್ರಾಮದ ಮಹೇಶ ಪತ್ನಿಯ ತವರು ಮನೆ ಫತೆಪುರದಲ್ಲಿ ನೆಲೆಸಿದ್ದನು. ಟ್ರ್ಯಾಕ್ಟರ್‌  ಚಲಾಯಿಸುತ್ತಿದ್ದ ಆತ ಡೀಸೆಲ್ ತರಲೆಂದು ಬಂದಿದ್ದರು. ಕ್ಯಾನ್‌ನಲ್ಲಿ ಡೀಸೆಲ್ ತುಂಬಿಕೊಂಡು ಬಂದ ಆತ ಫತೆಪುರ ಕ್ರಾಸ್ ಬಳಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟುಹೋಗಿದ್ದಾನೆ. ಮಾಹಿತಿ ತಿಳಿದು ಸಬ್ ಇನ್‌ಸ್ಪೆಕ್ಟರ್‌ ಗಂಗಮ್ಮ ಜಿನಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತ ಮಹೇಶ ಅಸಹಜವಾಗಿ ವರ್ತಿಸುತ್ತಿದ್ದನು. ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ಪತ್ತೆಯಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.