ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಓಕಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ರೋಡ ರೋಲರ್ ಹರಿದು ಓಕಳಿ ಗ್ರಾಮದ ನಿವಾಸಿ ಸಾಯಿಬಣ್ಣ ಮಲ್ಲೇಶಪ್ಪ ಮಾದರ (65) ಎಂಬುವರು ಮೃತಪಟ್ಟಿದ್ದಾರೆ.
‘ಕಾರ್ಯದ ನಿಮಿತ್ತ ಕಮಲಾಪುರಕ್ಕೆ ಬಂದಿದ್ದ ಸಾಯಿಬಣ್ಣ ಅವರು ಮನೆಗೆ ಮರಳಲು ರಸ್ತೆ ದಾಟುತ್ತಿದ್ದರು. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಹಿಂಬದಿ ಚಲಿಸುತ್ತಿದ್ದ ರೋಡ್ ರೋಲರ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಹಿಂಬದಿಯಲ್ಲಿ ವ್ಯಕ್ತಿ ಇರುವುದಾಗಿ ಎಷ್ಟೇ ಕೂಗಿಕೊಂಡರೂ ರೋಲರ್ ಚಾಲಕ ಕಿವಿಗೊಡಲಿಲ್ಲ’ ಎಂದು ಪ್ರತ್ಯಕ್ಷರ್ಶಿಗಳು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.