ಕಲಬುರ್ಗಿ: ಜನವರಿ 3ರಂದು ನಡೆಯಲಿರುವ ಮಗಳ ಮದುವೆಗಾಗಿ ತಂದಿಟ್ಟಿದ್ದ ₹ 2 ಲಕ್ಷ ಮೌಲ್ಯದ ಬಟ್ಟೆಗಳು, ಪಾತ್ರೆಗಳು ಹಾಗೂ ದಿನಸಿ ವಸ್ತುಗಳನ್ನು ಕಳ್ಳರು ಇಲ್ಲಿನ ಎನ್ಜಿಒ ಕಾಲೊನಿಯ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇದರಿಂದ ಕಂಗಾಲಾದ ಕುಟುಂಬ ಕಣ್ಣೀರಿಡುತ್ತಿದೆ. ಶಂಕರರಾವ್–ಉಮಾ ಕುಲಕರ್ಣಿ ದಂಪತಿಯ ಪುತ್ರಿ ಪ್ರಿಯಾ ಅವರ ವಿವಾಹ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮನ್ನಾ ಎಖೆಳ್ಳಿ ಗ್ರಾಮದ ಅನಿರುದ್ಧ ಅವರೊಂದಿಗೆ ನಡೆಯಲಿದೆ. ಅದಕ್ಕಾಗಿ ಮುಂಚೆಯೇ ದಿನಸಿ, ಬಟ್ಟೆ, ಪಾತ್ರೆಗಳನ್ನು ಖರೀದಿಸಿ ಮನೆಯಲ್ಲಿ ಇರಿಸಲಾಗಿತ್ತು. ಶಂಕರರಾವ್ ಅವರು ಇನ್ನೊಂದು ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಿಗ್ಗೆ ಬಂದು ನೋಡಿದಾಗ ವಸ್ತುಗಳೆಲ್ಲ ಕಳ್ಳತನವಾಗಿದ್ದವು.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.