ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಗುರುವಾರ ಮತ್ತೆ ಲಘು ಕಂಪನ ಸಂಭವಿಸಿದೆ.
ಮಧ್ಯಾಹ್ನ 1.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂತು ಎಂದು ಗ್ರಾಮದ ರೈತ ಮುಖಂಡ ಸಂತೋಷ ಕುಮಾರ ಬಳಿ ಪ್ರಜಾವಾಣಿಗೆ ತಿಳಿಸಿದರು.
'ಆಗ ತಕ್ಷಣ ಬೇರೆಯವರಿಗೆ ಕರೆ ಮಾಡಿ ಕೇಳಿದ್ದೇನೆ. ಅವರು ಶಬ್ದ ಬಂದಿದ್ದು ಹಾಗೂ ಲಘು ಕಂಪನದ ಅನುಭವ ತಮಗೂ ಅಯಿತು ಎಂದಿದ್ದಾರೆ.
ನಿರಂತರ ಲಘು ಕಂಪನದಿಂದ ಗ್ರಾಮಸ್ಥರು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ಮನೆ ಹೊರಗಡೆಯೇ ಕಾಲಕಳೆಯುವುದು ಅನಿವಾರ್ಯವಾಗಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.