ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಹಜರತ ಖಾಜಾ ಸೈಫನ ಮುಲ್ಕಬಂಡಿ ಜಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಜರುಗಿತು.
ಶನಿವಾರ ರಾತ್ರಿ 12.30ಕ್ಕೆ ಕರಜಗಿ ಗ್ರಾಮದಿಂದ ಹಜರತ್ ಖಾಜಾ ಸೈಫನ್ ಮುಲ್ಕರ ಗಂಧ ಹಾಗೂ ಗಲಾಪ್ ಹೊತ್ತುಕೊಂಡು ಬಂದಿದ್ದ ಜೋಡಿ ಎತ್ತುಗಳ ಮೆರವಣಿಗೆ ಜನರ ಜೈಕಾರ ಮತ್ತು ವಾದ್ಯಗಳೊಂದಿಗೆ ನಡೆಯಿತು. ಇಡೀ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ ಮುಲ್ಕ್ ದರ್ಗಾಕ್ಕೆ ಭಾನುವಾರ ಬೆಳಿಗ್ಗೆ ತಲುಪಿತು.
ನಂತರ ಗಂಧ ಲೇಪನ ಮಾಡಿ ಕೊಂಡು ಬೆಳಿಗ್ಗೆ ಅಲ್ಲಿಂದ ಹೊರಟು ಮಧ್ಯಾಹ್ನ ಕರಜಗಿ ದರ್ಗಾಕ್ಕೆ ತಲುಪಿತು. ಬಂಡಿ ಕುಳಿತ ನಂತರ ‘ಸೈಫನ್ ಮುಲ್ಕ್ ಕಿ ದೊಸ್ತಾರಾ ಹೊ ದಿನ್’ ಎಂದು ಭಕ್ತರು ಜೈಕಾರ ಕೂಗಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮುಖಂಡರಾದ ಪೊನ್ನಪ್ಪ ಇರ್ಫಾನ್, ಚಿದಾನಂದ ತಳವಾರ, ರಮೇಶ ಕ್ಷತ್ರಿಯ, ಗಿರಿಮಲ್ಲಯ್ಯ ಹಿರೇಮಠ, ಖಾಸಿಂ ಚೌದರಿ, ಉಸ್ಮಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.