ADVERTISEMENT

ಕಲಬುರ್ಗಿ | ಹಣ ಕೊಡಲಿಲ್ಲವೆಂದು ವಾಹನ ಡಿಕ್ಕಿ ಹೊಡೆಸಿ ಸ್ಕೂಟರ್‌ ಸವಾರನ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಮೇ 2020, 12:41 IST
Last Updated 17 ಮೇ 2020, 12:41 IST
ಅಬ್ದುಲ್ ರಹೀಂ
ಅಬ್ದುಲ್ ರಹೀಂ   

ಕಲಬುರ್ಗಿ: ಕೇಳಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ಕೂಟರ್‌ನಲ್ಲಿ ಹೊರಟಿದ್ದ ತನ್ನ ದೂರದ ಸಂಬಂಧಿಗೆ ಹಿಂದಿನಿಂದ ಜೀಪ್‌ನಿಂದ ಗುದ್ದಿಸಿ ಕೊಲೆ ಮಾಡಿದ ಘಟನೆ ರಿಂಗ್‌ ರಸ್ತೆಯಲ್ಲಿ ಶುಕ್ರವಾರ ನಡೆದಿದ್ದು, ಸ್ಕೂಟರ್ ಸವಾರ ಬಿಲಾಲಾಬಾದ್‌ ಬ್ಯಾಂಕ್‌ ಕಾಲೊನಿ ನಿವಾಸಿ ಅಬ್ದುಲ್‌ ರಹೀಂ ಅಬ್ದುಲ್ ಘನಿ (63) ಅವರು ಮೃತಪಟ್ಟಿದ್ದಾರೆ.

ಅಂದು ಬೆಳಿಗ್ಗೆ ರಿಂಗ್‌ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೊಲೆರೊ ವಾಹನದಲ್ಲಿ ಬಂದ ಅಬ್ದುಲ್‌ ರಹೀಂ ಅವರ ತಮ್ಮನ ಅಳಿಯ ಮಕ್ಬೂಲ್‌ ಅಬ್ದುಲ್‌ ಹಮೀದ್‌ ಸೌದಾಗರ ಎಂಬಾತ ಡಿಕ್ಕಿ ಪಡಿಸಿದ್ದರಿಂದ ಗಾಯಗೊಂಡು ಮೃತಪಟ್ಟರು. ಶುಕ್ರವಾರ ಯಾವದೋ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಭಾನುವಾರ ಸಂಚಾರ ಠಾಣೆಗೆ ಹಾಜರಾದ ಮೃಯ ಅಬ್ದುಲ್‌ ಘನಿ ಅವರ ಪುತ್ರ ಅಜ್ಮೋದ್ದೀನ್‌, ತಂದೆಯವರ ಬಳಿ ಹಣ ಕೇಳಿದ್ದ. ಆದರೆ, ಕೊಡಲು ನಿರಾಕರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತನಿಖಾಧಿಕಾರಿಯಾದ ಸಂಚಾರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಶಾಂತಿನಾಥ ಅವರಿಗೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಆಧರಿಸಿ ಮಕ್ಬೂಲ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್‌ ಸತೀಶಕುಮಾರ್‌ ಎನ್‌. ತಿಳಿಸಿದರು.

ಡಿಕ್ಕಿ ಪ್ರಕರಣವು ರೋಜಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಸಂಚಾರ ಠಾಣೆಯಿಂದ ಪ್ರಕರಣವನ್ನು ವರ್ಗಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.