ADVERTISEMENT

ಅಫಜಲಪುರ:‘ನನ್ನ ಊರು ನನ್ನ ಬೇರು’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:35 IST
Last Updated 2 ನವೆಂಬರ್ 2020, 2:35 IST
ಅಫಜಲಪುರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ ಎಸ್. ಅವರು ರಾಜ್ಯೋತ್ಸವ ನಿಮಿತ್ತವಾಗಿ ಭಾನುವಾರ ರಾಜ್ಯದ ಚರಿತ್ರೆ ಹೇಳುವ ‘ನನ್ನ ಊರು – ನನ್ನ ಬೇರು’ ಅಭಿಯಾನ ಆರಂಭಿಸಿದರು.
ಅಫಜಲಪುರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ ಎಸ್. ಅವರು ರಾಜ್ಯೋತ್ಸವ ನಿಮಿತ್ತವಾಗಿ ಭಾನುವಾರ ರಾಜ್ಯದ ಚರಿತ್ರೆ ಹೇಳುವ ‘ನನ್ನ ಊರು – ನನ್ನ ಬೇರು’ ಅಭಿಯಾನ ಆರಂಭಿಸಿದರು.   

ಅಫಜಲಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಕರ್ನಾಟಕ ರಾಜ್ಯದ ಇತಿಹಾಸ ಅರಿತುಕೊಳ್ಳುವ ‘ನನ್ನ ಊರು ನನ್ನ ಬೇರು’ ಅಭಿಯಾನವನ್ನು ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ ಎಸ್. ಭಾನುವಾರ ಆರಂಭಿಸಿದರು.

‘ನನ್ನ ಊರು – ನನ್ನ ಬೇರು’ ಇದು ಒಂದು ರಾಜ್ಯದ ಬಗ್ಗೆ ಇತಿಹಾಸ ಹೇಳಿಕೊಡಲು ನಾನು ಮಾಡುತ್ತಿರುವ ಸಣ್ಣ ಪ್ರಯತ್ನವಾಗಿದೆ. ಇದರಿಂದ ಜನರಲ್ಲಿ ಮತ್ತು ಮಕ್ಕಳಲ್ಲಿ ರಾಜ್ಯದ ಬಗ್ಗೆ ಆತ್ಮ ಗೌರವ, ಆತ್ಮಸ್ಥೈರ್ಯ ಬೆಳೆಯುತ್ತದೆ. ಇಂತಹ ಅಭಿಯಾನವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಮಾಡಬೇಕು. ನಾನು ಐಎಎಸ್‌ ಅಧಿಕಾರಿಯಾಗಿದ್ದು, ನನಗೆ 4 ವಾರ ಅಫಜಲಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಸೂಚಿಸಿದೆ. ಒಂದು ವಾರ ಮುಗಿದಿದೆ. ಇನ್ನೂ 3 ವಾರ ಕಾರ್ಯನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯದ ಚರಿತ್ರೆ ಮತ್ತು ಕೊಡುಗೆಗಳನ್ನು ಪಸರಿಸುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅಭಿಯಾನವನ್ನು ಮಕ್ಕಳಿಂದ ಉದ್ಘಾಟಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಬಾಬು, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಎನ್‌.ಜಿ.ಹಿರೇಮಠ, ಮಲ್ಲು ಪಾಟೀಲ, ಪುರಸಭೆ ಸದಸ್ಯರಾದ ಯಮನಪ್ಪ ಭಾಸಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.