ADVERTISEMENT

‘ಬೀದರ್‌–ಕಲಬುರ್ಗಿ–ಯಶವಂತಪುರ ರೈಲು ಶೀಘ್ರ’

ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 11:42 IST
Last Updated 31 ಡಿಸೆಂಬರ್ 2019, 11:42 IST
ಬೀದರ್‌ನಿಂದ ವಿವಿಧೆಡೆ ನೂತನ ರೈಲುಗಳ ಸಂಚಾರ ಆರಂಭಿಸುವ ಕುರಿತು ಸಂಸದ ಭಗವಂತ ಖೂಬಾ ಅವರು ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರೊಂದಿಗೆ ಸಿಕಂದರಾಬಾದ್‌ನಲ್ಲಿ ಮಾತುಕತೆ ನಡೆಸಿದರು
ಬೀದರ್‌ನಿಂದ ವಿವಿಧೆಡೆ ನೂತನ ರೈಲುಗಳ ಸಂಚಾರ ಆರಂಭಿಸುವ ಕುರಿತು ಸಂಸದ ಭಗವಂತ ಖೂಬಾ ಅವರು ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರೊಂದಿಗೆ ಸಿಕಂದರಾಬಾದ್‌ನಲ್ಲಿ ಮಾತುಕತೆ ನಡೆಸಿದರು   

ಕಲಬುರ್ಗಿ: ಬೀದರ್‌–ಕಲಬುರ್ಗಿ–ಯಶವಂತಪುರ ರೈಲನ್ನು ದಕ್ಷಿಣ ಮಧ್ಯ ರೈಲ್ವೆಯು ಶೀಘ್ರ ಆರಂಭಿಸಲಿದ್ದು, ಕಲಬುರ್ಗಿ ಮೂಲಕ ಬೀದರ್‌–ಹುಬ್ಬಳ್ಳಿ ಮಧ್ಯೆ ನೂತನ ರೈಲು ಆರಂಭವಾಗಲಿದೆ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ಸಿಕಂದರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಲ್ಯ ಅವರು ಎರಡು ಹೊಸ ರೈಲುಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದರು.

‘ಔರಾದ್ ಮಾರ್ಗವಾಗಿ ಬೀದರ್–ನಾಂದೇಡ ರೈಲ್ವೆ ಮಾರ್ಗದ ಅಂತಿಮ ಹಂತದ ಸರ್ವೆ ಮುಗಿದಿದ್ದು, ಕೆಲವು ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬೀದರ್‌ನಿಂದ–ದೆಹಲಿಗೆ ರೈಲು ಓಡಿಸುವ ಹಾಗೂಬೀದರ್–ಕಲಬುರ್ಗಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವುದಾಗಿ ತಿಳಿಸಿರುತ್ತಾರೆ ಎಂದು ಸಂಸದ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.