ಕಲಬುರ್ಗಿ: ಇಲ್ಲಿಯ ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಕಲಬುರ್ಗಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನವನ್ನು ಆಚರಿಸಲಾಯಿತು.
ಮುಖ್ಯ ಭಾಷಣಕಾರರಾಗಿದ್ದ ಎನ್.ಎಸ್.ಎಸ್. ವಿಭಾಗೀಯ ಸಂಯೋಜನಾಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಈ ಜಗತ್ತು ನಿಂತಿರುವುದು ಸ್ವಯಂ ಸೇವಕರ ನಿಸ್ವಾರ್ಥ ಸೇವೆಯಿಂದ. ಪರರ ಸೇವೆಯೇ ದೈವ ಸೇವೆಯಾಗಿದೆ. ವಿಶ್ವ ಸಂಸ್ಥೆ ಸ್ವಯಂ ಸೇವಕರನ್ನು ಗೌರವಿಸಲು ಹಾಗೂ ಅವರ ಸೇವೆ ಸ್ಮರಿಸಲು 1985ರ ಡಿಸೆಂಬರ್ 5ರಂದು ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಸವರಾಜ ಗಾಣೂರೆ, ಸ್ವಯಂ ಪ್ರಜ್ಞೆಯಿಂದ ವಿಶ್ವಾಸದ ಸೇವೆಯೇ ಪರಮೋಚ್ಛ ಸೇವೆಯಾಗಿದೆ. ಇದರಿಂದ ಪ್ರತಿಯೊಬ್ಬರ ಬದುಕು ಶಾಂತಿ ಮತ್ತು ನೆಮ್ಮದಿ ತಂದು ಕೊಡುತ್ತದೆ. ಈ ನಿಟ್ಟಿನಲ್ಲಿ ಜಗತ್ತಿನ ಉದ್ಧಾರಕ್ಕಾಗಿ ದುಡಿದ ಪ್ರತಿಯೊಬ್ಬರನ್ನೂ ಸ್ಮರಿಸುತ್ತದೆ ಎಂದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪಾಂಡು ಎಲ್.ರಾಠೋಡ ಸ್ವಾಗತ ಭಾಷಣ ಮಾಡಿದರು. ಮಾಪಣ್ಣ ಜಿರೋಳ್ಳಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಮಲ್ಲಯ್ಯ ಮಠಪತಿ, ಶಾಂತಪ್ಪ, ದೇವರಾಜ ಹಾಗೂ ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.