ADVERTISEMENT

‘ಪತ್ರಿಕಾ ಭವನ ನಿರ್ಮಾಣ ಶೀಘ್ರ’: ಶಾಸಕ ಎಂ.ವೈ.ಪಾಟೀಲ ಭರವಸೆ

ಪತ್ರಿಕಾ ದಿನಾಚರಣೆಯಲ್ಲಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:14 IST
Last Updated 1 ಆಗಸ್ಟ್ 2021, 2:14 IST
ಅಫಜಲಪುರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಿದರು
ಅಫಜಲಪುರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಿದರು   

ಅಫಜಲಪುರ: ಪ್ರಜಾಪ್ರಭುತ್ವದ ಯಶಸ್ವಿಗೆ ಮಾಧ್ಯಮಗಳ ಪಾತ್ರ ಅಪಾರವಾದುದು.ಎಲ್ಲ ಕ್ಷೇತ್ರಗಳ ಚಿತ್ರಣ ತಿಳಿಸಿ ಅರಿವು ಮೂಡಿಸುವ ಕಾರ್ಯ ಗಳನ್ನು ಮಾಧ್ಯಮ ಮಾಡಬೇಕು ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವಿಗೆ ನಿಲ್ಲಬೇಕು. ಯುವ ಪತ್ರಕರ್ತರು ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ADVERTISEMENT

ತಾಲ್ಲೂಕಿನಲ್ಲಿ ಶೀಘ್ರದಲ್ಲಿ ಪತ್ರಿಕಾ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿದರು. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ವಿವಿಧ ಕ್ಷೇತ್ರಗಳಸಾಧಕರಿಗೆ ಹಾಗೂ ಪತ್ರಿಕಾ ವಿತರಿಕರಿಗೆ ಸನ್ಮಾನಿಸಲಾಯಿತು.

ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ವಗ್ಗೆ, ಪತ್ರಕರ್ತ ಗುಂಡುರಾವ್ ಶಾಸಕರಿಗೆ ಮನವಿ ಸಲ್ಲಿಸಿದರು.

ಪುರಸಭೆ ಅಧ್ಯಕ್ಷೆ ರೇಣುಕಾ ಪಾಟೀಲ, ಮುಖಂಡರಾದ ದೇವಿಂದ್ರಪ್ಪ ಅವಂಟಿ, ದೇವಿಂದ್ರಪ್ಪ ಕಪನೂರ, ಹನುಮಂತರಾವ್ ಬೈರಾಮಡಗಿ, ರಾಜಕುಮಾರ ದೇಶಮುಖ, ಸಿಪಿಐ ಜಗದೇವಪ್ಪ ಪಾಳಾ, ಮತೀನ ಪಟೇಲ್, ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಮಹಾಂತೇಶ ಪಾಟೀಲ, ಬಸವರಾಜ ಚಾಂದಕವಟೆ, ಮಂಜೂರ ಅಹ್ಮದ ಅಗರಖೇಡ, ಶೈಲೇಶ್ ಗುಣಾರಿ, ಶ್ರೀಶೈಲ ಬಳೂರ್ಗಿ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.