ADVERTISEMENT

ಬಂಜಾರಾ ಸಮಾಜದಿಂದ ಪ್ರತಿಭಟನೆ

ಅತ್ಯಾಚಾರ: ಕಠಿಣ ಶಿಕ್ಷೆ ವಿಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 5:43 IST
Last Updated 21 ಡಿಸೆಂಬರ್ 2021, 5:43 IST
ಚಿತ್ತಾಪುರದಲ್ಲಿ ಬಂಜಾರಾ ಸಮಾಜದ ಗೋರ ಸೇನಾ ಪದಾಧಿಕಾರಿಗಳು, ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಚಿತ್ತಾಪುರದಲ್ಲಿ ಬಂಜಾರಾ ಸಮಾಜದ ಗೋರ ಸೇನಾ ಪದಾಧಿಕಾರಿಗಳು, ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಚಿತ್ತಾಪುರ: ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಬಂಜಾರಾ ಸಮಾಜದ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಅತ್ಯಾಚಾರ ಮಾಡಿದ ಆರೋಪಿ ಮತ್ತು ಆತನ ಜತೆಗಿದ್ದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಮನವಿ ಪತ್ರವನ್ನು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಸಲ್ಲಿಸಲಾಯಿತು.

ADVERTISEMENT

ಮುಖಂಡರಾದ ಗೋಪಾಲ್ ರಾಠೋಡ್, ಅರವಿಂದ ಚವಾಣ್, ಕವಿತಾ ಚವಾಣ್, ರಾಮದಾಸ್ ಚವಾಣ್, ಗೋರ ಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಮನೋಜ ರಾಠೋಡ್, ಜಿಲ್ಲಾ ಘಟಕದ ಉಪಾಧ್ಯಕ್ಷ ಅಶ್ವತ್ಥರಾಮ ರಾಠೋಡ್, ಜಿಲ್ಲಾ ನಗರ ಘಟಕದ ಅಧ್ಯಕ್ಷ ಶ್ರೀಧರ, ರವಿ ಚವಾಣ್, ಜಗದೀಶ ಚವಾಣ್, ಆನಂದ ಚವಾಣ್, ರವಿ ರಾಠೋಡ್, ರಾಮು ರಾಠೋಡ್, ಆಕಾಶ ಚವಾಣ್, ದೇವಿದಾಸ ಚವಾಣ್, ಅನಿಲ್ ಪವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.