ADVERTISEMENT

ರಾಮಲಿಂಗೇಶ್ವರ ರಥೋತ್ಸವ, ಧರ್ಮಸಭೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:11 IST
Last Updated 11 ಏಪ್ರಿಲ್ 2022, 5:11 IST
ಕಾಳಗಿ ತಾಲ್ಲೂಕಿನ ಮೊಘಾ ಗ್ರಾಮದಲ್ಲಿ ಭಾನುವಾರ ರಾಮಲಿಂಗೇಶ್ವರ ರಥೋತ್ಸವ ಜರುಗಿದ ಬಳಿಕ ನಡೆದ ಧರ್ಮಸಭೆಯನ್ನು ಗಣ್ಯರು ಉದ್ಘಾಟಿಸಿದರು
ಕಾಳಗಿ ತಾಲ್ಲೂಕಿನ ಮೊಘಾ ಗ್ರಾಮದಲ್ಲಿ ಭಾನುವಾರ ರಾಮಲಿಂಗೇಶ್ವರ ರಥೋತ್ಸವ ಜರುಗಿದ ಬಳಿಕ ನಡೆದ ಧರ್ಮಸಭೆಯನ್ನು ಗಣ್ಯರು ಉದ್ಘಾಟಿಸಿದರು   

ಕಾಳಗಿ: ತಾಲ್ಲೂಕಿನ ಮೊಘಾ ಗ್ರಾಮದ ರಾಮಲಿಂಗೇಶ್ವರ ಪ್ರಥಮ ರಥೋತ್ಸವ ಸಂಭ್ರಮದಿಂದ ಭಾನುವಾರ ಸಂಜೆ ಜರುಗಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ‘ಮೊಘಾ ರಾಮಲಿಂಗೇಶ್ವರ ದೇವಾಲಯದ ನವೀಕರಣಕ್ಕಾಗಿ ಎಎಸ್ಐ ₹3.10ಕೋಟಿ ಮಂಜೂರು ಮಾಡಿದೆ. ಈ ದೇವಾಲಯಕ್ಕೆ ಹೋಗುವ ರಸ್ತೆ ಮುಂದಿನ ವರ್ಷದವರೆಗೆ ನಿರ್ಮಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿದರು.

ADVERTISEMENT

ರಥೋತ್ಸವದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ, ಭರತನೂರಿನ ಗುರುನಂಜೇಶ್ವರ ಮಹಾಸ್ವಾಮೀಜಿ, ನರನಾಳದ ಶಿವಕುಮಾರ ಶಿವಾಚಾರ್ಯ, ಹುಲಸೂರಿನ ಡಾ.ಶಿವಾನಂದ ಮಹಾಸ್ವಾಮೀಜಿ, ಪಸ್ತಾಪುರದ ದೇವಿಂದ್ರ ಮಹಾರಾಜ ಸಾನಿಧ್ಯ ವಹಿಸಿದ್ದರು.

ಭೀಮಶೇನರಾವ ಕುಲಕರ್ಣಿ, ಅಶೋಕ ಪಾಟೀಲ ಚಿಂಚೋಳಿ, ಚಂದ್ರಶೇಖರ ಹರಸೂರ, ಗೌತಮ ಪಾಟೀಲ, ಸಂತೋಷ ಗಡಂತಿ, ಶೈಲೇಶ ಹುಲಿ, ರಾಮರಾವ ಪಾಟೀಲ, ಸಿದ್ದು ಪಾಟೀಲ, ಅಲ್ಲಮಪ್ರಭು ಹುಲಿ, ಗೌರಿಶಂಕರ, ಮಲ್ಲು ಕೊಡಂಬಲ, ಶಿವಯೋಗಿ ರುಸ್ತಂಪುರ, ಆನಂದಸ್ವಾಮಿ, ನೀಲಕಂಠ ಸೀಳಿನ್, ಸಂತೋಷಕುಮಾರ ಕುಂಬಾರ, ನವಲಿಂಗ ಪಾಟೀಲ, ಪ್ರಶಾಂತ ಕದಂ ಸೆರಿದಂತೆ ಅನೇಕ ಭಕ್ತರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.