ಕಾಳಗಿ:ತಾಲ್ಲೂಕಿನ ಬೆಡಸೂರ (ಎಂ) ತಾಂಡಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಬಂಜಾರ ಸಮಾಜದ ಮುಖಂಡ ಗೋಪಾಲದೇವ ಜಾಧವ ಅವರ ಪುಣ್ಯಸ್ಮರಣೆ ಸೋಮವಾರ ಸರಳವಾಗಿ ಜರುಗಿತು.
ಜಾಧವ ಅವರ ಪುತ್ಥಳಿಗೆ ವಿವಿಧ ಮಠಾಧೀಶರು, ಗಣ್ಯರು ಹೂಮಾಲೆ ಹಾಕಿ ನಮಿಸಿ ಸ್ಮರಿಸಿದರು.
ಕಬ್ಬಿಣಗುತ್ತಿಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ರಟಕಲ್ ವಿರಕ್ತಮಠದ ಸಿದ್ದರಾಮ ಸ್ವಾಮಿಗಳು, ನಾಗೂರಿನ ಅಲ್ಲಂಪ್ರಭು ಸ್ವಾಮೀಜಿ, ಸಂಸದ ಉಮೇಶ ಜಾಧವ, ಶಾಸಕ ಅವಿನಾಶ ಜಾಧವ, ಬಂಜಾರ ಸಮಾಜದ ಮುಖಂಡ ರಾಮಚಂದ್ರ ಜಾಧವ, ಶಿವರಾಜ ಪಾಟೀಲ ಗೊಣಗಿ, ಶಾಮರಾವ ರಾಠೋಡ, ಪ್ರೇಮಸಿಂಗ್, ಈಶ್ವರನಾಯಕ ಖಾನಾಪುರ, ಬಸವರಾಜ ಪಾಟೀಲ ಬೆಡಸೂರ, ಗ್ರಾ.ಪಂ ಅಧ್ಯಕ್ಷ ಸಂಜುಕುಮಾರ ಕೆಳಮನಿ, ತಾ.ಪಂ ಇಒ ಡಾ.ಅನಿಲಕುಮಾರ ರಾಠೋಡ, ಉಮೇಶ ಚವಾಣ, ಶೇಖರ ಪಾಟೀಲ, ರಾಜು ಜಾಧವ, ಇಮ್ತಿಯಾಜ್ ಅಲಿ, ಶಿವಶರಣಪ್ಪ ಗುತ್ತೇದಾರ, ಮಹೇಂದ್ರ ಪೂಜಾರಿ, ಚಂದ್ರಕಾಂತ ಜಾಧವ, ರಾಮು ರಾಠೋಡ, ಮಾರುತಿ ಜಮಾದಾರ, ಸಿದ್ದಯ್ಯ ಮಠಪತಿ ಆಗಮಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.