ADVERTISEMENT

ಸಂಗಮೇಶ್ವರ ಶಿವಾಚಾರ್ಯ ನಿಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 20:22 IST
Last Updated 15 ನವೆಂಬರ್ 2020, 20:22 IST
ಸಂಗಮೇಶ್ವರ ಶಿವಾಚಾರ್ಯರು
ಸಂಗಮೇಶ್ವರ ಶಿವಾಚಾರ್ಯರು   

ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮುದ್ದಡಗಾ ಗ್ರಾಮದ ಸಂಸ್ಥಾನ ಹಿರೇಮಠದ ಪೀಠಾಧಿಪತಿ, ಶತಾಯುಷಿ ಸಂಗಮೇಶ್ವರ ಶಿವಾಚಾರ್ಯರು (101) ಭಾನುವಾರ ನಿಧನರಾದರು.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಕುರನೂರ ಗ್ರಾಮದಲ್ಲಿ ಜನಸಿದ್ದ ಸ್ವಾಮೀಜಿ, 1984ರಲ್ಲಿ ಮುದ್ದಡಗಾ ಗ್ರಾಮಕ್ಕೆ ಬಂದು ಸಂಸ್ಥಾನ ಹಿರೇಮಠದ ಪೀಠಾರೋಹಣ ಮಾಡಿದ್ದರು. ನಂತರ ಲೋಕಕಲ್ಯಾಣಕ್ಕೆ 51 ಬಾರಿ ಉಪವಾಸ ಅನುಷ್ಠಾನ ಮಾಡಿದ್ದರು.

ಸೋಮವಾರ ಬೆಳಿಗ್ಗೆ 10ಕ್ಕೆ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಂಜೆ 4ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.