ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದ ರಹೆಮತ್ನಗರ ಸಮೀಪ ಭಾನುವಾರ ಲೋಕಮಾನ್ಯ ತಿಲಕ್ (ಎಲ್ಟಿಟಿ) ರೈಲಿಗೆ ಸಿಲುಕಿ 100ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕು ರಸ್ತಾಪುರ ಗ್ರಾಮದ ಮರೆಪ್ಪ ಅಂಬಲಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಇವರು ಕುರಿ ಮೇಯಿಸುತ್ತಿದ್ದರು. ಕುರಿಗಳು ಹಳಿ ದಾಟುವ ವೇಳೆ ರೈಲು ಹರಿದು ಹೋಗಿದೆ.
ಕುರಿಗಳ ಅಂದಾಜು ಮೌಲ್ಯ ₹10 ಲಕ್ಷ ಎಂದು ಕುರಿ ಮಾಲೀಕ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.