ಕಲಬುರ್ಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಲ್ಲಯ್ಯ ಗುತ್ತೇದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಳಿದ ಪದಾಧಿಕಾರಿಗಳೂ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆದ ಚುನಾವಣೆಯಲ್ಲಿ ಗುತ್ತೇದಾರ ಬಣದವರೇ ಚುನಾಯಿತರಾದರು.
ಬಾಬು ಮೌರ್ಯ (ಪ್ರಧಾನ ಕಾರ್ಯದರ್ಶಿ), ಜಯಶ್ರೀ ಕಟ್ಟಿಸಂಗಾವಿ (ಮಹಿಳಾ ಉಪಾಧ್ಯಕ್ಷೆ), ವೀರೇಂದ್ರ ಕಲ್ಯಾಣಿ (ಉಪಾಧ್ಯಕ್ಷ), ಹೈದರಾಬಾದ್ ಚೌಧರಿ (ಕೋಶಾಧ್ಯಕ್ಷ), ಗುರುನಾಥ (ಸಂಘಟನಾ ಕಾರ್ಯದರ್ಶಿ), ಶಬಾನಾ ಬೇಗಂ (ಮಹಿಳಾ ಸಂಘಟನಾ ಕಾರ್ಯದರ್ಶಿ), ಗೊಲ್ಲಾಳಪ್ಪ ಯಾತನೂರ (ಸಹ ಕಾರ್ಯದರ್ಶಿ), ಮಹಾದೇವಿ ಬಿರಾದಾರ ಅವರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಶಾಂತಪ್ಪ ಮಳ್ಳಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.