ADVERTISEMENT

ಮೂಕಸಿದ್ಧೇಶ್ವರ ದೇಗುಲ ಉದ್ಘಾಟನೆ 28ರಂದು

ಹರವಾಳ: ಉಚಿತ ಸಾಮೂಹಿಕ ವಿವಾಹ, ಪ್ರವಚನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:15 IST
Last Updated 26 ಫೆಬ್ರುವರಿ 2020, 12:15 IST
ಜೇವರ್ಗಿ ತಾಲ್ಲೂಕಿನ ಹರವಾಳ ಕ್ರಾಸ್ ಹತ್ತಿರ ನೂತನವಾಗಿ ನಿರ್ಮಿಸಿದ ಆರಾಧ್ಯ ದೈವ ಮೂಕಸಿದ್ಧೇಶ್ವರ ದೇವಸ್ಥಾನ
ಜೇವರ್ಗಿ ತಾಲ್ಲೂಕಿನ ಹರವಾಳ ಕ್ರಾಸ್ ಹತ್ತಿರ ನೂತನವಾಗಿ ನಿರ್ಮಿಸಿದ ಆರಾಧ್ಯ ದೈವ ಮೂಕಸಿದ್ಧೇಶ್ವರ ದೇವಸ್ಥಾನ   

ಜೇವರ್ಗಿ: ‘ತಾಲ್ಲೂಕಿನ ಹರವಾಳ ಗ್ರಾಮದ ಮೂಕಸಿದ್ಧೇಶ್ವರ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಶರಣರ ಜೀವನ ದರ್ಶನ ಪ್ರವಚನ ಸಮಾರೋಪ ಹಾಗೂ 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆ.28ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ’ ಎಂದು ಸೊನ್ನ ವಿರಕ್ತಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಹರವಾಳ ಕ್ರಾಸ್ ಹತ್ತಿರದ ಮೂಕಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರ್ಗಿ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಫೆ.27ರಂದು ವಿಶೇಷ ಸನ್ಮಾನ ಹಾಗೂ ದೀಪೋತ್ಸವ ನಡೆಯಲಿದೆ. ಶಹಾಪುರ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಕುಮಸಗಿಯ ಅಭಿನವ ವೆಂಕಟೇಶ ಸ್ವಾಮೀಜಿ,ಈರಯ್ಯಸ್ವಾಮಿ ಹಿರೇಮಠ ತದ್ದೇವಾಡಿ ಭಾಗವಹಿಸಲಿದ್ದಾರೆ’ ಎಂದರು.

‘ಫೆ.28 ರಂದು ಬೆಳಿಗ್ಗೆ 6 ಗಂಟೆಗೆ ಮೂಕಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ನಡೆಯಲಿದೆ. 11 ಗಂಟೆಗೆ ಮೂಕಸಿದ್ಧೇಶ್ವರ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ನಡೆಯಲಿದೆ. ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯರು, ಫಿರೋಜಾಬಾದ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಡಾ.ಅಜಯಸಿಂಗ್ ಧಾರ್ಮಿಕ ಸಭೆ ಉದ್ಘಾಟಿಸುವರು’ ಎಂದರು.

ADVERTISEMENT

‘ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಭಾಗವಹಿಸುವರು’ ಎಂದು ಹೇಳಿದರು.

‘ಸೊನ್ನದ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಹಾಗೂ ಮೂಕಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಕಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಂ.ಬಿ.ಪಾಟೀಲ ಹರವಾಳ ಹೇಳಿದರು.

ಅಪ್ಪಣ್ಣಗೌಡ ಪೊಲೀಸ್ ಪಾಟೀಲ ಹರವಾಳ, ರೇವಪ್ಪ ಬಂಗಾರಶೆಟ್ಟಿ,ರುದ್ರಗೌಡ ಸೊಪ್ಪಣ್ಣ, ಸಿದ್ದಣ್ಣ ಕೊತಲಿ, ಶ್ರೀಮಂತ ಸಾಹು ಗಣಜಲಖೇಡ, ಶೇಖರ ಮದರಿ, ಅಶೋಕ ಸಾಹು ಗಣಜಲಖೇಡ, ಸಿದ್ದಣ್ಣಗೌಡ ಮಾಲಿಪಾಟೀಲ, ಕಲ್ಲಪ್ಪ ದ್ಯಾಮಾ, ಬಸಲಿಂಗಪ್ಪ ಭಾಸಗಿ, ಪ್ರಭಾಕರ ರಬಶೆಟ್ಟಿ, ಶಿವಶರಣಪ್ಪ ಸಾಹು ಗಣಜಲಖೇಡ, ಮಲ್ಲಿಕಾರ್ಜುನ ಆದವಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.