ADVERTISEMENT

ಸೇಡಂ: ದೇವರ ದರ್ಶನಕ್ಕೆ ಮುಂದಾದ ಸಾಧುವನ್ನು ಎಳೆದಾಡಿ ಅವಮಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 3:45 IST
Last Updated 19 ಅಕ್ಟೋಬರ್ 2021, 3:45 IST
ಸೇಡಂನ ಯಾನಾಗುಂದಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ಸಾಧು ಒಬ್ಬರನ್ನು ಎಳೆದೊಯ್ದ ಸಿಬ್ಬಂದಿ
ಸೇಡಂನ ಯಾನಾಗುಂದಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ಸಾಧು ಒಬ್ಬರನ್ನು ಎಳೆದೊಯ್ದ ಸಿಬ್ಬಂದಿ   

ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಯಾನಾಗುಂದಿ ಗ್ರಾಮದ ದೇವಸ್ಥಾನದ ಸಿಬ್ಬಂದಿ ದೇವರ ದರ್ಶನಕ್ಕೆ ಮುಂದಾದ ಸಾಧು ಒಬ್ಬರನ್ನು ಎಳೆದಾಡಿದ್ದಾರೆ ಎನ್ನಲಾದ ವಿಡಿಯೊ ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮದ ಬೆಟ್ಟದ ಮೇಲಿನ ಮಾತೆ ಮಾಣಿಕೇಶ್ವರಿಯ ಸನ್ನಿಧಿಯತ್ತ ತೆರಳಲು ಸಾಧು ಮುಂದಾದರು. ಆಗ ದೇವಸ್ಥಾನದ ಸಿಬ್ಬಂದಿ ಬಂದು, ‘ಕೀಲಿ ಏಕೆ ಒಡೆಯುತ್ತಿದ್ದಿಯಾ’ ಎಂದು ಪ್ರಶ್ನಿಸಿ ದರದರನೆ ಎಳೆದೊಯ್ದು ನಿಂದಿಸಿದ್ದಾರೆ ಎನ್ನಲಾಗುತ್ತಿದೆ.

ಎಳೆದೊಯ್ಯುವಾಗ ಸಾಧು ‘ಓ ನಮೋ ನಾರಾಯಣ’ ಮಂತ್ರ ಜಪಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಈ ಕುರಿತು ಮಾಹಿತಿ ಪಡೆಯಲು ‘ಪ್ರಜಾವಾಣಿ’ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಕರೆ ಮಾಡಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.