ADVERTISEMENT

ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಸಾವಿರ ರೊಟ್ಟಿ ನೀಡಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:06 IST
Last Updated 3 ಫೆಬ್ರುವರಿ 2020, 13:06 IST
ಅಫಜಲಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿಯ 204 ಶಾಲಾ ಮಕ್ಕಳು ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಒಂದು ಸಾವಿರ ರೊಟ್ಟಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಪರಮಾನಂದ ಸರಸಂಬಿ ಹಾಗ ಶಿಕ್ಷಕರಾದ ಸಂಗೀತಾ ಬುಳ್ಳಾ, ಮಕ್ತುಂಸಾಬ್, ಶಬ್ಬೀರ ಅಲಿ ದೊಡಮನಿ, ಜಾವೀದ ಹುಂಡೇಕಾರ,ವಿದ್ಯಾರ್ಥಿಗಳಾದ ಶಿವಾನಂದ, ಶ್ರೀಕಾಂತ, ಆರೀಫ್, ಆಕಾಶ, ಲಕ್ಷೀಕಾಂತ ಇದ್ದರು
ಅಫಜಲಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿಯ 204 ಶಾಲಾ ಮಕ್ಕಳು ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಒಂದು ಸಾವಿರ ರೊಟ್ಟಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಪರಮಾನಂದ ಸರಸಂಬಿ ಹಾಗ ಶಿಕ್ಷಕರಾದ ಸಂಗೀತಾ ಬುಳ್ಳಾ, ಮಕ್ತುಂಸಾಬ್, ಶಬ್ಬೀರ ಅಲಿ ದೊಡಮನಿ, ಜಾವೀದ ಹುಂಡೇಕಾರ,ವಿದ್ಯಾರ್ಥಿಗಳಾದ ಶಿವಾನಂದ, ಶ್ರೀಕಾಂತ, ಆರೀಫ್, ಆಕಾಶ, ಲಕ್ಷೀಕಾಂತ ಇದ್ದರು   

ಅಫಜಲಪುರ: ತಾಲ್ಲೂಕಿನ ಕೆಕ್ಕರಸಾವಳಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 204 ಶಾಲಾ ಮಕ್ಕಳುಭಾನುವಾರ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಸಾವಿರ ರೊಟ್ಟಿಗಳನ್ನು ಕೊಡುವ ಮೂಲಕ ಕನ್ನಡ ಅಭಿಮಾನ ಮೆರೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಕ್ಕಳಲ್ಲಿ ಇರುವ ಕನ್ನಡ ನಾಡು ನುಡಿ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಡಿವಾಳಪ್ಪ ನಾಗರಹಳ್ಳಿ, ಚಿ.ಸಿ.ಲಿಂಗಣ್ಣ, ದೌಲತರಾಯ ಪಾಟೀಲ, ಹಣಮಂತರಾಯ ದೊಡಮನಿ, ಸಿ.ಎಸ್.ಮಾಲೀಪಟೀಲ, ಶಿವಾನಂದ ಪೂಜಾರಿ, ಮಲ್ಲಿಕಾರ್ಜುನ ಚವಡಿಹಾಳ, ಶಿವಯೋಗಿ ಸುಂಠ್ಯಾಣ, ಹುಸೇನಿ ಮುಜಾವರ, ಭೀಮಾಶಂಕರ ಮೇಳಕುಂದಿ,ಶಾಲಾ ಮುಖ್ಯ ಶಿಕ್ಷಕರಾದ ಪರಮಾನಂದ ಸರಸಂಬಿ, ಶಾಲಾ ಶಿಕ್ಷಕರಾದ ಸಂಗೀತಾ ಬುಳ್ಳಾ, ಮಕ್ತುಂಸಾಬ್, ಶಬ್ಬೀರ ಅಲಿ ದೊಡಮನಿ, ಜಾವೀದ ಹುಂಡೇಕಾರ,ವಿದ್ಯಾರ್ಥಿಗಳಾದ ಶಿವಾನಂದ, ಶ್ರೀಕಾಂತ, ಆರೀಫ್, ಆಕಾಶ, ಲಕ್ಷೀಕಾಂತ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.