ಕಲಬುರ್ಗಿ: ಮರಾಠಿ ನಾಟಕಕಾರ ಮಹೇಶ ಎಲಕುಂಚವಾರ್ ಅವರ ‘ಆತ್ಮಕಥಾ’ ನಾಟಕದ ಕನ್ನಡ ಅನುವಾದವನ್ನು ರಂಗನಟ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ಭಾನುವಾರ ವಾಚಿಸಿದರು.
ಕಲಬುರ್ಗಿ ರಂಗಾಯಣದಲ್ಲಿ ಆಯೋಜಿಸಿದ ನಾಟ್ಯಶಾಸ್ತ್ರ ಅಧ್ಯಯನ ಶಿಬಿರದಲ್ಲಿ ಕಲಾವಿದರ ಕಲಿಕೆಯ ಭಾಗವಾಗಿ ನಾಟಕ ವಾಚನ ಏರ್ಪಡಿಸಲಾಗಿತ್ತು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಹಿರಿಯ ರಂಗಕರ್ಮಿಗಳಾದ ಪ್ರಭಾಕರ ಸಾತಖೇಡ, ಶಂಕ್ರಯ್ಯ ಘಂಟಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಸುರೇಶ ಹೇರೂರ, ಕಲಾವಿದ ಅಶೋಕ ಚಿತ್ಕೋಟಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ್ ವಿಸಾಜಿ ಹಾಗೂ ರಂಗ ನಿರ್ದೇಶಕ ಅಮಿತ್ ರೆಡ್ಡಿ ಹಾಗೂ ಕಲಾವಿದರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.