ADVERTISEMENT

ಈಜಲು ಹೋಗಿ ತಂದೆ- ಮಗ ಸಾವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:04 IST
Last Updated 16 ನವೆಂಬರ್ 2020, 5:04 IST

ಸೇಡಂ: ತಾಲ್ಲೂಕಿನ ಸಂಗಾವಿ (ಎಂ) ಬಳಿ ಭಾನುವಾರ ನದಿಯಲ್ಲಿ ಈಜಲು ಹೋದ ತಂದೆ- ಮಗ ನೀರುಪಾಲಾಗಿದ್ದಾರೆ.

ಸಂಗಾವಿ ಗ್ರಾಮದ ಮಿರ್ಜಾ ಖಾಯಂ ಅಲಿ (51) ಮತ್ತು ಅವರ ಪುತ್ರ ಮಿರ್ಜಾ ಮೆಹದಿ ಅಲಿ (19) ಮೃತಪಟ್ಟವರು. ಇಬ್ಬರೂ ಹೈದರಾಬಾದ್ ಬಂಜಾರ ಹಿಲ್ಸ್ ನಿವಾಸಿಗಳು ಎಂದು ತಿಳಿದುಬಂದಿದೆ.

ರಜೆಯ ಹಿನ್ನೆಲೆಯಲ್ಲಿ ಮಳಖೇಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಗಾವಿ ಸೇತುವೆ ಬಳಿ ತಂದೆ ಮತ್ತು ಮಕ್ಕಳು ಈಜಲು ಹೋಗಿದ್ದರು. ತಂದೆ ಮುಳುಗುತ್ತಿರುವಾಗ ರಕ್ಷಿಸಲು ಇಬ್ಬರು ಮಕ್ಕಳು ಹೋಗಿದ್ದರು. ಅದರಲ್ಲಿ ಒಬ್ಬ ಮಗ ಮತ್ತು ತಂದೆ ನೀರು ಪಾಲಾದರು. ಇನ್ನೊಬ್ಬ ಮಗ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.