ADVERTISEMENT

ಕಲಬುರಗಿ: ವೀರಣ್ಣ ಪಡಶೆಟ್ಟಿ ನಿಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 15:19 IST
Last Updated 25 ಅಕ್ಟೋಬರ್ 2021, 15:19 IST
ವೀರಣ್ಣ ಪಡಶೆಟ್ಟಿ
ವೀರಣ್ಣ ಪಡಶೆಟ್ಟಿ   

ಕಲಬುರಗಿ: ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಥಿಯೊಸಾಫಿಕಲ್ ಸೊಸೈಟಿ ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣ ಎಂ. ಪಡಶೆಟ್ಟಿ (87) ಭಾನುವಾರ ರಾತ್ರಿ ನಿಧನರಾದರು.

ಅವರಿಗೆ ನಿವೃತ್ತ ಉಪನ್ಯಾಸಕಿ, ಪತ್ನಿ ಶಾಂತಾದೇವಿ ಪಡಶೆಟ್ಟಿ, ನಾಲ್ವರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಹುದ್ದೆಯಿಂದ ನಿವೃತ್ತರಾದ ದಿನದಿಂದ 2021ರವರೆಗೂ ಥಿಯೊಸಾಫಿಕಲ್‌ ಸೊಸೈಟಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಪ್ರಗತಿ ಕಾಲೊನಿಯ ವಚನೋತ್ಸವ ಸಮಿತಿ ಅಧ್ಯಕ್ಷರಾಗಿದ್ದರು.

ADVERTISEMENT

ದೇಹದಾನ: ಸಮಾಜಸೇವೆಗೆ ಸದಾ ಮುಂಚೂಣಿಯಲ್ಲಿದ್ದ ಪಡಶೆಟ್ಟಿ ಅವರ ಕೊನೆಯ ಆಶಯದಂತೆ ಅವರ ಕಣ್ಣುಗಳನ್ನು ಬಸವೇಶ್ವರ ಆಸ್ಪತ್ರೆಗೆ ಮತ್ತು ದೇಹವನ್ನು ಜಿಮ್ಸ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.